ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಗ್ಯಾಸ್​ ಸ್ಪೋಟಗೊಂಡು ಹೋಟೆಲ್​ಗೆ ಬೆಂಕಿ: ಓರ್ವನಿಗೆ ಗಾಯ -

ಮಂಗಳೂರು ನಗರದ ಹೋಟೆಲ್​​ವೊಂದ ಅಡುಗೆ ಅನಿಲ ಸ್ಪೋಟಗೊಂಡು ಬೆಂಕಿ ತಗುಲಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ.

ಬೆಂಕಿ ಆರಿಸುತ್ತಿರುವ ಅಗ್ನಿಶಾಮಕದಳ ಸಿಬ್ಬಂದಿ

By

Published : Jul 26, 2019, 10:58 AM IST

ಮಂಗಳೂರು: ನಗರದ ರಾವ್ ಆ್ಯಂಡ್​ ರಾವ್ ಸರ್ಕಲ್ ನಲ್ಲಿರುವ ಹೋಟೆಲ್​​ವೊಂದರಲ್ಲಿ ಗ್ಯಾಸ್​ ಸ್ಫೋಟದಿಂದ ಬೆಂಕಿ‌ ಬಿದ್ದು ಓರ್ವ ಗಾಯಗೊಂಡಿದ್ದಾನೆ.

ಬೆಂಕಿ ಆರಿಸುತ್ತಿರುವ ಅಗ್ನಿಶಾಮಕದಳ ಸಿಬ್ಬಂದಿ

ರಾವ್ ಆ್ಯಂಡ್​ ರಾವ್ ಸರ್ಕಲ್ ಬಳಿಯ ಕಟ್ಟಡವೊಂದರಲ್ಲಿದ್ದ ಸಣ್ಣ ಹೋಟೆಲ್​ನಲ್ಲಿ ಈ ಅವಘಡ ಸಂಭವಿಸಿದೆ. ಗ್ಯಾಸ್ ನಿಂದ ಹೊರಬಂದ ಬೆಂಕಿ ಹೋಟೆಲ್ ಸಿಬ್ಬಂದಿ ಅಶ್ರಫ್ ಎಂಬುವರ ಮುಖಕ್ಕೆ ತಗುಲಿದ್ದು, ತೀವ್ರ ಗಾಯವಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಗ್ನಿಶಾಮಕದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

For All Latest Updates

TAGGED:

ABOUT THE AUTHOR

...view details