ಮಂಗಳೂರು:ನಗರದ ಹೊರವಲಯದ ಕೆತ್ತಿಕಲ್ ಎಂಬಲ್ಲಿ ಕಾರು ಮತ್ತು ಬಸ್ ನಡುವೆ ಅಪಘಾತವಾಗಿ ಬಸ್ ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.
ಮಂಗಳೂರು ಬಳಿ ಕಾರು-ಬಸ್ ಡಿಕ್ಕಿ: ಕಾರು ಚಾಲಕ ಸಾವು - ಮಂಗಳೂರು ಬಳಿ-ಕಾರು-ಬಸ್ ಅಪಘಾತ ಸುದ್ದಿ
ಮಂಗಳೂರು ಬಳಿಯ ಕೆತ್ತಿಕಲ್ ಎಂಬಲ್ಲಿ ಕಾರು ಮತ್ತು ಬಸ್ ನಡುವೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿ ಹೊಂಡಕ್ಕೆ ಬಿದ್ದಿದೆ.
![ಮಂಗಳೂರು ಬಳಿ ಕಾರು-ಬಸ್ ಡಿಕ್ಕಿ: ಕಾರು ಚಾಲಕ ಸಾವು bus](https://etvbharatimages.akamaized.net/etvbharat/prod-images/768-512-5522055-thumbnail-3x2-surya.jpg)
ಕಾರು ಚಾಲಕ ದುರ್ಮರಣ
ಕಾರು ಚಾಲಕ ದುರ್ಮರಣ
ಅಪಘಾತದಲ್ಲಿ ಕಾರು ಚಾಲಕ ವರ್ನನ್ ಬ್ರಾಯನ್ ಸಲ್ವಡೋರ್ ಡಿಸಿಲ್ವ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಕೆತ್ತಿಕಲ್ ಬಳಿ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಬಸ್ ಪಕ್ಕದಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ಬಸ್ ಮೇಲಕ್ಕೆತ್ತಲಾಗಿದ್ದು, ಬಸ್ನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.