ಕರ್ನಾಟಕ

karnataka

By

Published : Apr 5, 2021, 3:30 PM IST

ETV Bharat / state

ಸಮುದ್ರದಲ್ಲಿ ಕೆಟ್ಟು ನಿಂತ ಡ್ರಜ್ಜರ್​ನ ಕಾವಲುಗಾರ ಶವವಾಗಿ ಪತ್ತೆ!

ಇಂದು ಬೆಳಗ್ಗೆ ಡ್ರಜ್ಜರ್​​ನಲ್ಲಿ ಅವರ ಶವ ಪತ್ತೆಯಾಗಿದೆ. ಈ ಸಂಬಂಧ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ..

dresser watchman dead body found
ಸಮುದ್ರದಲ್ಲಿ ಕೆಟ್ಟು ನಿಂತ ಡ್ರಜ್ಜರ್​ನ ಕಾವಲುಗಾರ ಶವವಾಗಿ ಪತ್ತೆ

ಮಂಗಳೂರು :ಮಂಗಳೂರಿನ ಸಮುದ್ರ ತೀರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ಕಾವಲುಗಾರನ ಶವ ಪತ್ತೆಯಾಗಿದೆ.

ಸುರತ್ಕಲ್‌ನ ಗುಡ್ಡಗಾಡು ಕೊಪ್ಲ ಬಳಿಯ ಸಮುದ್ರದಲ್ಲಿ ಕೆಟ್ಟು ನಿಂತ ಡ್ರಜ್ಜರ್ ಭಗವತಿ ಪ್ರೇಮ್ ನಿಲ್ಲಿಸಲಾಗಿತ್ತು. ಈ ಡ್ರಜ್ಜರ್ ಒಡೆಯಲು ಕಂಪನಿಯೊಂದು ಗುತ್ತಿಗೆ ಪಡೆದಿದೆ. ಇದನ್ನು ನೋಡಿಕೊಳ್ಳಲು ಕಾವಲುಗಾರರನ್ನು ನೇಮಿಸಲಾಗಿತ್ತು.

ಈ ಕಾವಲುಗಾರರಲ್ಲಿ ಉತ್ತರ ಕರ್ನಾಟಕ ಮೂಲದ ಶಂಕರ್ (32) ಎಂಬುವರು ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರು. ಆದರೆ, ಇಂದು ಬೆಳಗ್ಗೆ ಡ್ರಜ್ಜರ್​​ನಲ್ಲಿ ಅವರ ಶವ ಪತ್ತೆಯಾಗಿದೆ. ಈ ಸಂಬಂಧ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ABOUT THE AUTHOR

...view details