ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ ಚರಂಡಿಗಳ ದುರಸ್ತಿ ಕಾರ್ಯ! - ಮಂಗಳೂರು ಚರಂಡಿ ವ್ಯವಸ್ಥೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ, ರಾಜಕಾಲುವೆ ಮೊದಲಾದ ದುರಸ್ತಿ ಕಾಮಗಾರಿಗಳಿಗೆ ಯಂತ್ರೋಪಕರಣಗಳ ಸಮಸ್ಯೆ ಇಲ್ಲದೇ ಇದ್ದರೂ ಕೊಂಚ ಸಿಬ್ಬಂದಿ ಸಮಸ್ಯೆಯಿಂದ ಸ್ವಲ್ಪ ಹಿನ್ನಡೆಯಾಗಿದೆ. ಆದರೂ ಮಳೆಗಾಲಕ್ಕೆ ಮಾಡಬೇಕಾದ ಪೂರ್ವ ತಯಾರಿ ಸಾಕಷ್ಟು ಮುಗಿದಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಲು ಯೋಜನೆ ರೂಪಿಸಲಾಗಿದೆ.

Drainage repair work
ಚರಂಡಿಗಳ ದುರಸ್ತಿ ಕಾರ್ಯ

By

Published : May 14, 2021, 10:06 AM IST

ಮಂಗಳೂರು:ಮಳೆಗಾಲಕ್ಕೂ ಮುನ್ನ ಮಹಾನಗರಗಳಲ್ಲಿ ಮಳೆ ನೀರು ಹರಿದು ಹೋಗಲು ಪೂರ್ವ ತಯಾರಿಗಳನ್ನು ಮಾಡಲಾಗುತ್ತದೆ. ಆದರೆ ಈ ಬಾರಿ ಕೋವಿಡ್​​ ಹಾವಳಿಯಿಂದ ಹಲವೆಡೆ ಈ ತಯಾರಿಗೆ ತಡೆಯಾಗಿದೆ. ಆದರೆ ಮಂಗಳೂರಿನಲ್ಲಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಚರಂಡಿಗಳ ದುರಸ್ತಿ ಕಾರ್ಯಗಳು ನಡೆಯುತ್ತಿದೆ.

ಚರಂಡಿಗಳ ದುರಸ್ತಿ ಕಾರ್ಯ - ಮೇಯರ್​ ಪ್ರತಿಕ್ರಿಯೆ

ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದಿದ್ದರೆ ನಗರಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಇದಕ್ಕಾಗಿ ಆಯಾ ಸ್ಥಳೀಯ ಸಂಸ್ಥೆಗಳು ಮಳೆಗಾಲ ಆರಂಭಕ್ಕೆ ಎರಡು ತಿಂಗಳು ಮುನ್ನವೇ ನೀರು ಸರಾಗವಾಗಿ ಹರಿದು ಹೋಗಲು ಪೂರ್ವ ತಯಾರಿಗಳನ್ನು ಮಾಡುತ್ತದೆ.

ಮಂಗಳೂರಿನಲ್ಲಿ ಈ ಬಾರಿ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ 60 ವಾರ್ಡುಗಳಲ್ಲಿ ರಾಜಕಾಲುವೆ ಒಳಚರಂಡಿಗಳ ದುರಸ್ತಿ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡಲಾಗಿದೆ. ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆದು ಮಳೆ ನೀರು ಹರಿದು ಹೋಗಲು ಬೇಕಾದ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.

ಕೋವಿಡ್​ನಿಂದ ಕೊಂಚ ಹಿನ್ನಡೆ:

ಮಂಗಳೂರಿನಲ್ಲಿ ಕೊರೊನಾ ಕಾರಣದಿಂದ ಸ್ವಲ್ಪ ಮಟ್ಟಿಗೆ ಕಾಮಗಾರಿಗೆ ಹಿನ್ನಡೆಯಾಗಿದೆ. ಹಲವೆಡೆ ಕಾರ್ಮಿಕರಿಗೆ ಕೊರೊನಾ ತಗುಲಿದ ಹಿನ್ನೆಲೆ ಹಲವು ಕಾರ್ಮಿಕರು ಕೆಲಸಕ್ಕೆ ಲಭ್ಯರಾಗಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ, ರಾಜಕಾಲುವೆ ಮೊದಲಾದ ದುರಸ್ತಿ ಕಾಮಗಾರಿಗಳಿಗೆ ಯಂತ್ರೋಪಕರಣಗಳ ಸಮಸ್ಯೆ ಇಲ್ಲದೇ ಇದ್ದರೂ ಕೊಂಚ ಸಿಬ್ಬಂದಿ ಸಮಸ್ಯೆಯಿಂದ ಸ್ವಲ್ಪ ಹಿನ್ನಡೆಯಾಗಿದೆ.

ಇದನ್ನೂ ಓದಿ:ನೀರಿನ‌ ಘಟಕಗಳ ಮೇಲೆ ಹದ್ದಿನ ಕಣ್ಣು: ಅಕ್ರಮ ಎಸಗಿದ್ರೆ ದಾಖಲಾಗುತ್ತೆ ಕ್ರಿಮಿನಲ್ ಕೇಸ್!

ಆದರೂ ಮಳೆಗಾಲಕ್ಕೆ ಮಾಡಬೇಕಾದ ಪೂರ್ವ ತಯಾರಿ ಸಾಕಷ್ಟು ಮುಗಿದಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಲು ಯೋಜನೆ ರೂಪಿಸಲಾಗಿದೆ.

ABOUT THE AUTHOR

...view details