ಕರ್ನಾಟಕ

karnataka

By

Published : Oct 23, 2019, 6:13 PM IST

ETV Bharat / state

ತುಳುವರ ಕೆಂಗಣ್ಣಿಗೆ ಗುರಿಯಾದ ಟ್ರೋಲ್​ ಪೇಜ್: ಕಾನೂನು ಕ್ರಮಕ್ಕೆ ವೇದವ್ಯಾಸ ಕಾಮತ್​ ಆಗ್ರಹ ​

ಕರಾವಳಿಯ ದೈವಾರಾಧನೆ ಅವಮಾನ ಮಾಡಿದ ‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಫೇಸ್​​​ಬುಕ್​ ಪೇಜ್ ವಿರುದ್ಧ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಈ ಪೋಸ್ಟ್ ಕುರಿತಾಗಿ ತಮ್ಮ ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ತುಳುವರ ಕೆಂಗಣ್ಣಿಗೆ ಗುರಿಯಾದ ಟ್ರೋಲ್​ಪೇಜ್

ಮಂಗಳೂರು:ಕರಾವಳಿಯ ದೈವಾರಾಧನೆಯನ್ನು ಅವಮಾನ ಮಾಡಿದ ಟ್ರೋಲ್ ಪೇಜ್ ಪೋಸ್ಟ್ ವಿರುದ್ಧ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಈ ಪೋಸ್ಟ್ ಕುರಿತಾಗಿ ತಮ್ಮ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿಯಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವ್ಯಕ್ತಿಗಳು ಮತ್ತು ಫೇಸ್​​​​ಬುಕ್​​​ ಪೇಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯಕ್ತ ಡಾ.ಪಿ.ಎಸ್.ಹರ್ಷ ಅವರಿಗೆ ಮನವಿಯನ್ನೂ ಸಹ ಮಾಡಿಕೊಂಡಿದ್ದಾರೆ.

ತುಳುವರ ಕೆಂಗಣ್ಣಿಗೆ ಗುರಿಯಾದ ಟ್ರೋಲ್​ಪೇಜ್

‘ಟ್ರೋಲ್ ಹೂ ಟ್ರೋಲ್ ಕನ್ನಡಿಗ’ ಎಂಬ ಫೇಸ್ಬುಕ್ ಪೇಜ್​ನಲ್ಲಿ ದೈವಾರಾಧನೆ ನಿಂದನೆ ಮಾಡುವ ಪೋಸ್ಟ್‌ ಹಾಕಲಾಗಿದೆ. ಈ ಹಿಂದೆಯೂ ದೈವ ದೇವರನ್ನು ಅವಮಾನಿಸುವ ರೀತಿಯ ಪೋಸ್ಟ್​ಗಳನ್ನು ಈ ಪೇಜ್​ನಲ್ಲಿ ಹಾಕಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದೈವಾರಾಧನಾ ಚಾವಡಿ ಮತ್ತು ದಲಿತ ರಕ್ಷಣಾ ವೇದಿಕೆಯವರು ಮಂಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರೊಂದನ್ನೂ ಸಹ ಸಲ್ಲಿಸಿದ್ದರು. ಆದರೂ ಈ ಟ್ರೋಲ್ ಪೇಜ್​​ನವರು ಇದೀಗ ಮತ್ತೊಮ್ಮೆ ತುಳುವರ ಭಾವನೆಗಳಿಗೆ ಧಕ್ಕೆ ತರುವಂತೆ ದೈವಗಳನ್ನು ತುಂಬಾ ಕೀಳುಮಟ್ಟದಲ್ಲಿ ಅವಮಾನಿಸುತ್ತಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ತುಳುವರ ಕೆಂಗಣ್ಣಿಗೆ ಗುರಿಯಾದ ಟ್ರೋಲ್​ಪೇಜ್

ಶಾಸಕ ವೇದವ್ಯಾಸ ಕಾಮತ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ರೈಮ್ ವಿಭಾಗದ ಡಿಸಿಪಿ ಅವರಿಗೆ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಭರವಸೆ ನೀಡಿದ್ದಾರೆ.

ABOUT THE AUTHOR

...view details