ಕರ್ನಾಟಕ

karnataka

By

Published : Sep 16, 2020, 11:14 PM IST

ETV Bharat / state

ಎಂಆರ್​ಪಿಎಲ್​ನಿಂದ ಉಂಟಾಗುತ್ತಿರುವ ಮಾಲಿನ್ಯ ಪ್ರಮಾಣ ಪರಿಶೀಲನೆಗೆ ಡಿಸಿ ಸೂಚನೆ

ಮಂಗಳೂರು ನಗರದ ಹೊರ ವಲಯದಲ್ಲಿರುವ ಜೋಕಟ್ಟೆ ಪರಿಸರದ ಆಸುಪಾಸಿನಲ್ಲಿ ಎಂಆರ್​ಪಿಎಲ್​ನಿಂದ ಉಂಟಾಗುತ್ತಿರುವ ಶಬ್ಧ ಮತ್ತು ವಾಯು ಮಾಲಿನ್ಯದ ನಿಖರ ಪ್ರಮಾಣದಲ್ಲಿ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

DC order to investigate the pollution quantity of MRPL
ಎಂಆರ್​ಪಿಎಲ್ ನಿಂದ ಉಂಟಾಗುತ್ತಿರುವ ಮಾಲಿನ್ಯ ಪ್ರಮಾಣ ಪರಿಶೀಲನೆಗೆ ಡಿಸಿ ಸೂಚನೆ

ಮಂಗಳೂರು:ನಗರದ ಹೊರ ವಲಯದಲ್ಲಿರುವ ಜೋಕಟ್ಟೆ ಪರಿಸರದ ಆಸುಪಾಸಿನಲ್ಲಿ ಎಂಆರ್​ಪಿಎಲ್​ನಿಂದ ಉಂಟಾಗುತ್ತಿರುವ ಶಬ್ಧ ಮತ್ತು ವಾಯು ಮಾಲಿನ್ಯದ ನಿಖರ ಪ್ರಮಾಣದಲ್ಲಿ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎಂಆರ್​ಪಿಎಲ್​​ನ 3ನೇ ಹಂತದ ಸಭೆಯಲ್ಲಿ ಕೋಕ್ ಮತ್ತು ಸಲ್ಫರ್ ಘಟಕದಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅವರು ಮಾತನಾಡಿದರು. ಈ ಪ್ರದೇಶದ ಸುತ್ತಮುತ್ತ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕೂಡಲೇ ಎಂಆರ್​ಪಿಎಲ್ ಸಂಸ್ಥೆ ಸ್ಪಂದಿಸಿ, ಜನರ ಅಹವಾಲು ಆಲಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಕೂಳೂರು ಜೋಕಟ್ಟೆ ರಸ್ತೆಯಲ್ಲಿ ಬಹಳಷ್ಟು ಹೊಂಡಗಳು ನಿರ್ಮಾಣವಾಗಿದ್ದು, ಈ ರಸ್ತೆಯನ್ನು ಬಳಸುತ್ತಿರುವ ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಲ್ಲೇ ದುರಸ್ತಿಪಡಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ರಸ್ತೆಗೆ ದಾರಿದೀಪ ಅಳವಡಿಸಲು ಕ್ರಮ ವಹಿಸುವಂತೆ ತಿಳಿಸಿದರು. ಅಲ್ಲದೆ, ಈ ರಸ್ತೆಯಲ್ಲಿ ಘನ ವಾಹನಗಳ ಪಾರ್ಕಿಂಗ್‍ ಮಾಡುವುದರಿಂದ ರಾತ್ರಿ ವೇಳೆ ಅಪಘಾತಕ್ಕೆ ಕಾರಣವಾಗುತ್ತಿದೆ. ಇದನ್ನು ತಪ್ಪಿಸಲು ಪಾರ್ಕಿಂಗ್ ನಿಯಂತ್ರಣಕ್ಕೆ ಸ್ಥಳಿಯ ಪೊಲೀಸರಿಗೆ ಸೂಚಿಸಲಾಗುವುದು ಎಂದರು.

ಸಭೆಯಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ್​ ಕೋಟ್ಯಾನ್, ಡಿಸಿಪಿ ಅರುಣಾಂಗ್ಶುಗಿರಿ, ಡಿಸಿಎಫ್ ಡಾ.ಕರಿಕಾಲನ್, ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ, ಮುಖಂಡರಾದ ಮುನೀರ್ ಕಾಟಿಪಳ್ಳ, ತಾಪಂಸದಸ್ಯ ಬಶೀರ್ ಅಹಮದ್, ಎಂಆರ್​ಪಿಎಲ್ ಮತ್ತು ಎಸ್‍ಇಝಡ್ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details