ಕರ್ನಾಟಕ

karnataka

By

Published : Sep 13, 2020, 8:27 PM IST

ETV Bharat / state

ದಕ್ಷಿಣ ಕನ್ನಡ: ಇಂದು 404 ಸೋಂಕಿತರು ಪತ್ತೆ: ಮೂವರು ಬಲಿ

ದ.ಕ ಜಿಲ್ಲೆಯಲ್ಲಿ ಇಂದು 404 ಸೋಂಕಿತರು ಪತ್ತೆಯಾಗಿದ್ದು, ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 66 ಹಾಗೂ ಹೋಮ್ ಐಸೋಲೇಷನ್​ನಲ್ಲಿದ್ದ 108 ಮಂದಿ ಗುಣಮುಖರಾಗಿದ್ದಾರೆ.

ವೆನ್ಲಾಕ್​ ಜಿಲ್ಲಾಸ್ಪತ್ರೆ
ವೆನ್ಲಾಕ್​ ಜಿಲ್ಲಾಸ್ಪತ್ರೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು 404 ಮಂದಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 17 ಸಾವಿರದ ಗಡಿ ದಾಟಿದೆ. ಇಂದು ಮತ್ತೆ ಮೂವರು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 442ಕ್ಕೆ ಏರಿಕೆಯಾಗಿದೆ.

ಬಂಟ್ವಾಳದ ಓರ್ವರು ಹಾಗೂ ಹೊರ ಜಿಲ್ಲೆಯ ಇಬ್ಬರು ಇಂದು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರೆಲ್ಲಾ ಸೋಂಕಿತರಾಗಿದ್ದು, ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದರು. ಹೊಸದಾಗಿ ಸೋಂಕಿತರಾಗಿರುವ 404 ಮಂದಿಯಲ್ಲಿ ಹೆಚ್ಚಿನವರು ಸಾಮಾನ್ಯ‌ ಶೀತ ಲಕ್ಷಣ ಹೊಂದಿರುವವರಾಗಿದ್ದಾರೆ. ಐಎಲ್ಐ ಪ್ರಕರಣದಲ್ಲಿ ಇಂದು 192 ಮಂದಿಗೆ ಸೋಂಕು ‌ದೃಢಗೊಂಡಿದೆ. ಸೋಂಕಿತರ ಸಂಪರ್ಕದಲ್ಲಿದ್ದ 111, ತೀವ್ರ ಉಸಿರಾಟದ ತೊಂದರೆಯಿಂದ 20 ಮಂದಿಗೆ ಹಾಗೂ 81 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಬೇಕಾಗಿದೆ. ಮಂಗಳೂರಿನ 212, ಬಂಟ್ವಾಳದ 60, ಪುತ್ತೂರು 46, ಸುಳ್ಯ 27, ಬೆಳ್ತಂಗಡಿ 39 ಇತರ ಜಿಲ್ಲೆಗಳ 20 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17,363ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 66 ಹಾಗೂ ಹೋಮ್ ಐಸೋಲೇಷನ್​ನಲ್ಲಿದ್ದ 108 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಭಾನುವಾರ 174 ಗುಣಮುಖರಾಗಿದ್ದಾರೆ. ಇದರೊಂದಿಗೆ 12,987 ಮಂದಿ ಕೊರೊನಾಮುಕ್ತರಾಗಿ ಮನೆಗೆ ತೆರಳಿದ್ದಾರೆ. ಆದರೂ ಜಿಲ್ಲೆಯಲ್ಲಿ 3,934 ಸಕ್ರಿಯ ಪ್ರಕರಣಗಳಿವೆ. ದ.ಕ.ಜಿಲ್ಲೆಯಲ್ಲಿ ಈವರೆಗೆ 1,21,093 ಮಂದಿಯ ಗಂಟಲು ದ್ರವ ಮಾದರಿಯನ್ನು ತಪಾಸಣೆ ಮಾಡಲಾಗಿದ್ದು, ಅದರಲ್ಲಿ 1,03,730 ಮಂದಿಯಲ್ಲಿ ನೆಗೆಟಿವ್ ಬಂದಿದೆ. 17,363 ಮಂದಿಯಲ್ಲಿ ಸೋಂಕು ದೃಢಗೊಂಡಿದೆ.

ABOUT THE AUTHOR

...view details