ಕರ್ನಾಟಕ

karnataka

ETV Bharat / state

ದ.ಕ.ಜಿಲ್ಲೆಯಲ್ಲಿ 229 ಮಂದಿಯಲ್ಲಿ ಕೊರೊನಾ ಸೋಂಕು ದೃಢ: 7 ಮಂದಿ ಬಲಿ! - ಮಂಗಳೂರು ಕೊರೊನಾ ಲೇಟೆಸ್ಟ್​ ಸುದ್ದಿ

ದ.ಕ.ಜಿಲ್ಲೆಯಲ್ಲಿ ರವಿವಾರ 7 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ‌ ಮೂಲಕ‌ ಮೃತಪಟ್ಟವರ ಸಂಖ್ಯೆ 269ಕ್ಕೇರಿದೆ.

Corona virus infects 229 people in Dakshina Kannada
ದ.ಕ.ಜಿಲ್ಲೆಯಲ್ಲಿ 229 ಮಂದಿಯಲ್ಲಿ ಕೊರೊನಾ

By

Published : Aug 16, 2020, 8:38 PM IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ರವಿವಾರ 7 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ‌ ಮೂಲಕ‌ ಮೃತಪಟ್ಟವರ ಸಂಖ್ಯೆ 269ಕ್ಕೇರಿದೆ. ಅಲ್ಲದೆ ಸೋಂಕಿಗೊಳಪಡುವರ ಸಂಖ್ಯೆಯೂ ಮೂರಂಕಿಗೆ ಜಿಗಿದಿದ್ದು, ಇಂದು‌ 229 ಮಂದಿ‌ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ಇದರಲ್ಲಿ ಮಂಗಳೂರಿನಲ್ಲಿ 122 ಮಂದಿಯಲ್ಲಿ ಸೋಂಕು‌ ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ‌ 36, ಬೆಳ್ತಂಗಡಿಯಲ್ಲಿ 8, ಪುತ್ತೂರಿನಲ್ಲಿ 31, ಸುಳ್ಯದಲ್ಲಿ ಓರ್ವನಿಗೆ ಸೋಂಕು ಪತ್ತೆಯಾಗಿದೆ. ಅಲ್ಲದೆ ಹೊರ ಜಿಲ್ಲೆಯಿಂದ ಬಂದಿರುವ 31 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಇಂದು‌ ಇಲಿ (ILI) ಪ್ರಕರಣದಲ್ಲಿ 123 ಮಂದಿಗೆ ಸೋಂಕು ತಗುಲಿದ್ದರೆ, ಸಾರಿ ಪ್ರಕರಣದಲ್ಲಿ 6 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 22 ಮಂದಿಗೆ ಸೋಂಕು ಪತ್ರೆಯಾಗಿದೆ. 78 ಮಂದಿಯ ಸೋಂಕಿನ ಮೂಲ ಇನ್ನು ಪತ್ತೆಯಾಗಬೇಕಿದೆ.

ದ.ಕ.ಜಿಲ್ಲೆಯಲ್ಲಿ ಇಂದು ಸೋಂಕಿನಿಂದ ಗುಣಮುಖರಾಗಿ 128 ಮಂದಿ‌ ಮನೆಗೆ ತೆರಳಿದ್ದಾರೆ‌. ದ.ಕ.ಜಿಲ್ಲೆಯಲ್ಲಿ‌ ಈವರೆಗೆ 70,712 ಮಂದಿಗೆ ಕೊರೊನಾ ಸೋಂಕು ತಪಾಸಣೆ ಮಾಡಲಾಗಿದ್ದು, 61,834 ಮಂದಿಗೆ ನೆಗೆಟಿವ್ ಬಂದಿದೆ. 8,878 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 2,164 ಮಂದಿ ಸೋಂಕಿತರಾಗಿ ಕ್ವಾರೆಂಟೈನ್​ನಲ್ಲಿದ್ದಾರೆ. ಇವರಲ್ಲಿ 6,445 ಮಂದಿ‌ ಗುಣಮುಖರಾಗಿ ಮನೆ ಸೇರಿದ್ದಾರೆ.

ABOUT THE AUTHOR

...view details