ಮಂಗಳೂರು:ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಗಾಂಧಿಯವರ ಕನಸನ್ನು ನನಸು ಮಾಡಿದೆ. ಆದರೆ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ, ಗಾಂಧಿ, ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಗಾಂಧಿ-ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ : ನಳೀನ್ ಕುಮಾರ್ - ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್
ಪೌರತ್ವ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಗಾಂಧಿಯವರ ಕನಸನ್ನು ನನಸು ಮಾಡಿದೆ. ಆದರೆ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷ, ಗಾಂಧಿ, ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಆರೋಪಿಸಿದ್ದಾರೆ.
![ಕಾಂಗ್ರೆಸ್ ಪಕ್ಷ ಗಾಂಧಿ-ಅಂಬೇಡ್ಕರ್ ಕನಸಿಗೆ ಬೆಂಕಿ ಇಟ್ಟಿದೆ : ನಳೀನ್ ಕುಮಾರ್ nalin kumar kateel](https://etvbharatimages.akamaized.net/etvbharat/prod-images/768-512-5865653-thumbnail-3x2-sanju.jpg)
ನಳೀನ್ ಕುಮಾರ್ ಕಟೀಲ್
ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಬಿಜೆಪಿ ವತಿಯಿಂದ ನಡೆದ ಸಿಎಎ ಬಗ್ಗೆ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಿರುವುದರಿಂದ ನಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿದ್ದೇವೆ. ದೇಶ ವಿಭಜನೆಯಾದ ಸಂದರ್ಭ ಪಾಕಿಸ್ತಾನದಿಂದ ಭಾರತಕ್ಕೆ ಬಂದವರಿಗೆ ಗಾಂಧಿಯವರು ಪೌರತ್ವ ನೀಡಬೇಕೆಂದು ಹೇಳಿದ್ದರು. ಆದರೆ ಕಾಂಗ್ರೆಸಿಗರು ಗಾಂಧಿಯ ಮಾತಿಗೆ ಬೆಲೆ ಕೊಡಲಿಲ್ಲ.ಆದ್ರೀಗ ನರೇಂದ್ರ ಮೋದಿಯವರು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಅವರ ಕನಸನ್ನು ನನಸು ಮಾಡಿದರು ಎಂದರು.
ನಳೀನ್ ಕುಮಾರ್ ಕಟೀಲ್
Last Updated : Jan 28, 2020, 5:19 AM IST