ಮಂಗಳೂರು:ನಗರದ ಪೊಲೀಸ್ ಆಯುಕ್ತರಾಗಿದ್ದ ಡಾ. ಪಿ.ಎಸ್. ಹರ್ಷ ಅವರಿಗೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದು, ತಾವು ಸೇವೆ ಸಲ್ಲಿಸಿರುವ ಮಂಗಳೂರಿನ ಜನತೆಗೆ ತುಳು ಭಾಷೆಯಲ್ಲಿ ಪ್ರೀತಿಪೂರ್ವಕವಾಗಿ ವಿದಾಯ ಪತ್ರ ಬರೆದಿದ್ದಾರೆ.
'ಕುಡ್ಲದ ಎನ್ನ ಮೋಕೆದ ಜನಕುಲೇ...' ತುಳುವಿನಲ್ಲೇ ವಿದಾಯ ಪತ್ರ ಬರೆದ ಪಿ.ಎಸ್. ಹರ್ಷ - ಮಂಗಳೂರು ಸಿಟಿ
ಮಂಗಳೂರು ಸಿಟಿ ಪೊಲೀಸ್ ಫೇಸ್ಬುಕ್ನಲ್ಲಿ ಈ ಸುದೀರ್ಘ ಪತ್ರ ಬರೆದಿರುವ ಐಪಿಎಸ್ ಅಧಿಕಾರಿ ನಿರ್ಗಮಿತ ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಇಡೀ ಪತ್ರವನ್ನು ತುಳು ಭಾಷೆಯಲ್ಲಿಯೇ ಬರೆದಿದ್ದಾರೆ.
!['ಕುಡ್ಲದ ಎನ್ನ ಮೋಕೆದ ಜನಕುಲೇ...' ತುಳುವಿನಲ್ಲೇ ವಿದಾಯ ಪತ್ರ ಬರೆದ ಪಿ.ಎಸ್. ಹರ್ಷ P.S Harsha](https://etvbharatimages.akamaized.net/etvbharat/prod-images/768-512-7808083-thumbnail-3x2-mng.jpg)
ಪಿ.ಎಸ್. ಹರ್ಷ
ಮಂಗಳೂರು ಸಿಟಿ ಪೊಲೀಸ್ ಫೇಸ್ಬುಕ್ನಲ್ಲಿ ಈ ಸುದೀರ್ಘ ಪತ್ರ ಬರೆದಿರುವ ಅವರು ಇಡೀ ಪತ್ರವನ್ನು ತುಳು ಭಾಷೆಯಲ್ಲಿಯೇ ಬರೆದಿರೋದು ವಿಶೇಷವಾಗಿದೆ. ಕುಡ್ಲದ ಎನ್ನ ಮೋಕೆದ ಜನಕುಲೇ, (ಕುಡ್ಲದ ನನ್ನ ಪ್ರೀತಿಯ ಜನಗಳೇ) ಎಂದು ಪ್ರೀತಿಪೂರ್ವಕವಾಗಿ ಬರೆದುಕೊಂಡಿದ್ದಾರೆ. ಮಂಗಳೂರು ಸಿಟಿ ಪೊಲೀಸ್ ಫೇಸ್ಬುಕ್ನಲ್ಲಿ ಕೆಲ ಗಂಟೆಗಳ ಹಿಂದಷ್ಟೇ ಪೋಸ್ಟ್ ಮಾಡಿದ್ದಾರೆ.
ಕುಡ್ಲದ ಎನ್ನ ಮೋಕೆದ ಜನಕುಲೇ... ಎಂದು ಶುರುವಾದ ಈ ಪತ್ರದಲ್ಲಿರುವ ಮಾಹಿತಿಯನ್ನು ಓದಿ..
Last Updated : Jun 28, 2020, 7:35 PM IST