ಕರ್ನಾಟಕ

karnataka

ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​​ ಪತ್ತೆ: ಪೊಲೀಸ್​ ಆಯುಕ್ತರು ಹೇಳಿದ್ದೇನು? - ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಇಂದು ಬೆಳಗ್ಗೆ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಮೂಡಿಸಿತ್ತು. ಬಜಪೆ ಪೊಲೀಸರು ಮತ್ತು ಏರ್​ಪೋರ್ಟ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದು, ಅನುಮಾನಾಸ್ಪದ ಬ್ಯಾಗ್ಅ​ನ್ನು ಸಿಎಎಸ್ಎಫ್ ಸಿಬ್ಬಂದಿ ಪರಿಶೀಲಿಸಿದ್ದಾರೆ.

Commissioner of Police Dr.P.S Harsha
ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ

By

Published : Jan 20, 2020, 2:10 PM IST

ಮಂಗಳೂರು:ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಇಂದು ಬೆಳಗ್ಗೆ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಮೂಡಿಸಿತ್ತು. ಬಜಪೆ ಪೊಲೀಸರು ಮತ್ತು ಏರ್​ಪೋರ್ಟ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದು, ಅನುಮಾನಾಸ್ಪದ ಬ್ಯಾಗ್ಅ​ನ್ನು ಸಿಎಎಸ್ಎಫ್ ಸಿಬ್ಬಂದಿ ಪರಿಶೀಲಿಸಿದ್ದಾರೆ.

ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ

ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ, ಇಲಾಖೆಯು ಭದ್ರತಾ ಕಾರ್ಯಗಳನ್ನು ಸಂಪೂರ್ಣ ನಿರ್ವಹಿಸಿದೆ‌‌. ಪರಿಸ್ಥಿತಿ ಈಗ ಶಾಂತವಾಗಿದ್ದು, ಹತೋಟಿಯಲ್ಲಿದೆ ಎಂದರು.

ದೊರೆತಿರುವ ಬ್ಯಾಗ್ಅ​ನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗಿದ್ದು, ಸದ್ಯ ಐಸೋಲೇಷನ್ ಬೇ ಪ್ರಕಾರ ಬ್ಯಾಗ್ ನಿರ್ವಹಣೆ ಮಾಡುವ ಕೆಲಸ ನಡೆಸಲಾಗಿದೆ‌. ಎಲ್ಲಾ ನಾಗರಿಕರನ್ನು ಬ್ಯಾಗ್ ದೊರಕಿರುವ ಸ್ಥಳದಿಂದ ದೂರ ಇರುವ ಹಾಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ABOUT THE AUTHOR

...view details