ಮಂಗಳೂರು: ದ.ಕ ಜಿಲ್ಲೆಯ ಪ್ರಾಂಶುಪಾಲರೊಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದು ಅವರು ಸುರಕ್ಷಿತವಾಗಿ ಮನೆ ಸೇರಲು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ನಿವಾಸಿ ಜೆರೊಮ್ ಸಿಕ್ವೇರಾ ಎಸ್.ಜೆ ಅಫ್ಘಾನಿಸ್ತಾನದಲ್ಲಿದ್ದು, ಮಂಗಳವಾರ ರಾತ್ರಿ ಅಣ್ಣ ಬೆರ್ನಾಡ್ ಸಿಕ್ವೇರಾ ಅವರಿಗೆ ಕರೆಮಾಡಿ ತಾನು ಸುರಕ್ಷಿತವಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾನುವಾರ ಊರಿಗೆ ಬರಲೆಂದು ಏರ್ಪೋರ್ಟ್ಗೆ ಬಂದಿದ್ದರೂ ಪ್ರಯಾಣ ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದ ಬಗ್ಗೆ ಮನೆಗೆ ಮಾಹಿತಿ ಮುಟ್ಟಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿನ ನಿವಾಸಿಗಳಾದ ಅಲ್ಫೊನ್ ಸಿಕ್ವೇರಾ ಮತ್ತು ಐರಿನ್ ಸಿಕ್ವೇರಾ ಅವರ 7 ಮಂದಿ ಮಕ್ಕಳಲ್ಲಿ ಜೆರೊಮ್ ಸಿಕ್ವೇರಾ(52) ಐದನೇಯವರು. ಸಿದ್ಧಕಟ್ಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದ ಅವರು ನಂತರ ದೇಶ-ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ನಂತರ ಜಾರ್ಖಂಡ್, ದೆಹಲಿ ಮೊದಲಾದೆಡೆ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ವಿಮಾನ ನಿಲ್ದಾಣ ತಾಲಿಬಾನಿಗಳ ವಶ