ಕರ್ನಾಟಕ

karnataka

ETV Bharat / state

ಮೂಡಿಗೆರೆಯಲ್ಲಿ ಬ್ಲಾಕ್​ 'ಡೇ': ಚೇತನ ಎಸ್ಟೇಟ್​ನಲ್ಲಿ ಸಿದ್ಧಾರ್ಥ್​ ಅಂತಿಮ ದರ್ಶನಕ್ಕೆ ಸಿದ್ಧತೆ - coffie cafe day chairman siddharth Funeral

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಚೇತನ ಎಸ್ಟೇಟ್​ನಲ್ಲಿ ಕಾಫಿ ಕೆಫೆ ಡೇ ಮಾಲಿಕ ಸಿದ್ದಾರ್ಥ್​ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿರುವುದು. ಸಿದ್ಧಾರ್ಥ್ ಅವರು ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅಳಿಯ ಆಗಿದ್ದು, ನಾಪತ್ತೆಯಾಗಿದ್ದರಿಂದ ಹಲವು ಅನುಮಾನಗಳು ಮೂಡಿದ್ದವು.

ಕಾಫಿ ಕೆಫೆ ಡೇ ಮಾಲಿಕ ಸಿದ್ಧಾರ್ಥ್​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

By

Published : Jul 31, 2019, 11:11 AM IST

ಚಿಕ್ಕಮಗಳೂರು:ಕಾಫಿ ಕೆಫೆ ಡೇ ಮಾಲಿಕ ಸಿದ್ದಾರ್ಥ್​ ಅವರ ಹುಟ್ಟೂರಾದ ಮೂಡಿಗೆರೆ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಚೇತನ ಎಸ್ಟೇಟ್​ನಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಕಾಫಿ ಕೆಫೆ ಡೇ ಮಾಲಿಕ ಸಿದ್ಧಾರ್ಥ್​ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಮಂಗಳೂರಿನಿಂದ ನೇರವಾಗಿ ಚಿಕ್ಕಮಗಳೂರಿನ ಎಬಿಸಿ ಆವರಣಕ್ಕೆ ಮೃತದೇಹ ತರಲಾಗುತ್ತಿದ್ದು. ಕೆಲ ಸಮಯ ದರ್ಶನಕ್ಕೆ ಇಟ್ಟು, ಚಿಕ್ಕನಹಳ್ಳಿ ಎಸ್ಟೇಟ್​ಗೆ ತರಲಾಗುವುದು. ಅಪಾರ ಸಂಖ್ಯೆಯಲ್ಲಿ ಸಂಬಂಧಿಕರು, ಸ್ನೇಹಿತರ ದಂಡು ಹರಿದು ಬರುತ್ತಿದ್ದು ಪೊಲೀಸ್​ ಕಾವಲು ಕೂಡ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಅಳಿಯ ಆಗಿದ್ದರಿಂದ ಅನೇಕ ರಾಜಕೀಯ ನಾಯಕರು ಆಗಮಿಸಲಿದ್ದಾರೆ. ಮನೆಯ ಪಕ್ಕದಲ್ಲೇ ಇರುವ ಆವರಣದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಕೂಡ ನಡೆಸಲಾಗುತ್ತಿದೆ.

ABOUT THE AUTHOR

...view details