ಕರ್ನಾಟಕ

karnataka

ETV Bharat / state

ಕೊರೊನಾ ಕಾಲಘಟ್ಟದಲ್ಲಿ ₹33 ಕೋಟಿ ಲಾಭ ಗಳಿಸಿದ ಎಸ್​ಸಿಡಿಸಿಸಿ ಬ್ಯಾಂಕ್ : ಎಂ ಎನ್ ರಾಜೇಂದ್ರ - CDC Bank, which has made a profit

ಸತತ 26 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಬ್ಯಾಂಕ್ ಶೇ.100ರಷ್ಟು ಸಾಧನೆ ಮಾಡಿದೆ. ಈಗಾಗಲೇ ದಕ್ಷಿಣ ಕನ್ನಡದಲ್ಲಿ ಮೊಬೈಲ್ ಬ್ಯಾಂಕ್ ಇದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗುವುದು..

ಎಂಎನ್ ರಾಜೇಂದ್ರ
ಎಂಎನ್ ರಾಜೇಂದ್ರ

By

Published : Apr 3, 2021, 4:20 PM IST

Updated : Apr 3, 2021, 4:26 PM IST

ಮಂಗಳೂರು :ಕೊರೊನಾ ಕಾಲಘಟ್ಟದಲ್ಲಿ 2020-21ರ‌ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ (ಎಸ್​ಸಿಡಿಸಿಸಿ) ಬ್ಯಾಂಕ್ 33.65 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್​ಸಿಡಿಸಿಸಿ ಬ್ಯಾಂಕ್​ನ ಇತಿಹಾಸದಲ್ಲಿ ಇಷ್ಟು ಲಾಭ ಗಳಿಸಿದ್ದು ಇದೇ ಮೊದಲು. ಕೊರೊನಾ ಸಂದರ್ಭದಲ್ಲಿಯೂ ಬ್ಯಾಂಕ್ ಸಿಬ್ಬಂದಿಯ ಪರಿಶ್ರಮ ಮತ್ತು ಗ್ರಾಹಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್​​ ಅಧ್ಯಕ್ಷ ಎಂಎನ್​ ರಾಜೇಂದ್ರ..

ಈ ವರ್ಷದಲ್ಲಿ 10,100.30 ಕೋಟಿ ರೂ. ವ್ಯವಹಾರ ನಡೆದಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 11,000 ಕೋಟಿ ರೂ. ವ್ಯವಹಾರದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಬ್ಯಾಂಕ್‌ನಿಂದ ನೀಡಲಾದ ಕೃಷಿ ಸಾಲ ಮರುಪಾವತಿ ಶೇ.100ರಷ್ಟು ಆಗಿದೆ.

ಸತತ 26 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಬ್ಯಾಂಕ್ ಶೇ.100ರಷ್ಟು ಸಾಧನೆ ಮಾಡಿದೆ. ಈಗಾಗಲೇ ದಕ್ಷಿಣ ಕನ್ನಡದಲ್ಲಿ ಮೊಬೈಲ್ ಬ್ಯಾಂಕ್ ಇದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಉಡುಪಿ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ..ಜಾಗತಿಕ ತಾಪಮಾನ ಎಫೆಕ್ಟ್ ​: ಕರಗುತ್ತಿದೆ ಅಂಟಾರ್ಟಿಕಾದ ಹಿಮನದಿಗಳು

Last Updated : Apr 3, 2021, 4:26 PM IST

ABOUT THE AUTHOR

...view details