ಕರ್ನಾಟಕ

karnataka

ETV Bharat / state

ಕಾಫಿ ಕಿಂಗ್​​ ದುರಂತ ಅಂತ್ಯ...! ಸಿದ್ಧಾರ್ಥ್​ ಮೃತದೇಹ ಪತ್ತೆ

ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ ಸಿದ್ಧಾರ್ಥ್​ ಮೃತದೇಹ ಇಂದು ಮುಂಜಾನೆ ದೊರೆತಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ.

By

Published : Jul 31, 2019, 7:57 AM IST

ಸಿದ್ಧಾರ್ಥ್​

ಮಂಗಳೂರು:ಜುಲೈ 29 ರ ರಾತ್ರಿಯಿಂದ ನಾಪತ್ತೆಯಾಗಿದ್ದ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ. ನೇತ್ರಾವತಿ ಹಿನ್ನೀರು ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.

ಮಂಗಳೂರಿನ ಹೊಯಿಗೆ ಬಜಾರ್​ನಲ್ಲಿ ಸಿದ್ಧಾರ್ಥ್​ ಮೃತದೇಹ ಇಂದು ಮುಂಜಾನೆ ದೊರೆತಿದೆ. ಶವವನ್ನು ಗುರುತಿಸಿದ ಮೀನುಗಾರರು ದಡಕ್ಕೆ ತಂದಿದ್ದಾರೆ. ಸದ್ಯ ಮಂಗಳೂರಿನ ವೆನ್ಲಾಕ್​ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ.

ಸಿದ್ಧಾರ್ಥ್​ ಅವರು ಬದುಕಿಬರಬಹುದೆಂದು ಕಾಯುತ್ತಿದ್ದ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚೇತನ ಹಳ್ಳಿಯಲ್ಲಿರುವ ಅವರ ಕುಟುಂಬ ವರ್ಗವು ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ.

ಕೆಫೆ ಕಾಫಿ ಡೇ ಸಂಸ್ಥೆಯ ನಷ್ಟದಿಂದಾಗಿ ನೊಂದಿದ್ದ ಸಿದ್ಧಾರ್ಥ್​ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಆದಾಯ ತೆರಿಗೆ ಇಲಾಖೆಯ ಈ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದರು ಎಂದು ಸಿದ್ಧಾರ್ಥ್​ ಅವರು ಬರೆದಿದ್ದರೆನ್ನಲಾದ ಪತ್ರವೊಂದು ವೈರಲ್​ ಆಗಿತ್ತು.

ಜುಲೈ 29 ರಿಂದ ನಾಪತ್ತೆಯಾಗಿದ್ದ ಎಸ್​ ಎಂ ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಶವವಾಗಿ ಪತ್ತೆಯಾಗಿದ್ದಾರೆ.

ABOUT THE AUTHOR

...view details