ಕರ್ನಾಟಕ

karnataka

ಲಾಕ್​ಡೌನ್​ ಹಿನ್ನೆಲೆ ಬ್ರಾಹ್ಮಣರ ನೆರವಿಗೆ ಬಂದ ಬಂಟ್ವಾಳದ ಉದ್ಯಮಿ

By

Published : May 10, 2020, 12:00 AM IST

ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ಬ್ರಾಹ್ಮಣ ಸಮುದಾಯದ ಅಡುಗೆ ಸಹಾಯಕರು, ಅರ್ಚಕ ಸಹಾಯಕರಿಗೆ ಉದ್ಯಮಿಯೊಬ್ಬರು ನೆರವಾಗಿದ್ದಾರೆ.

ವಅ ಬಂಟ್ವಾಳದ ಉದ್ಯಮಿ
ಬಂಟ್ವಾಳದ ಉದ್ಯಮಿ

ಬಂಟ್ವಾಳ (ದ.ಕ.):ಎಲ್ಲಾ ಸಮುದಾಯಗಳಂತೆ ಬ್ರಾಹ್ಮಣ ಸಮುದಾಯದ ಅರ್ಚಕರ ಸಹಾಯಕರು, ಅಡುಗೆ ಸಹಾಯಕರು, ಅಡುಗೆಯವರು ಸಹ ಲಾಕ್​ಡೌನ್​​ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸುಮಾರು 100 ಮಂದಿಯನ್ನು ಆಯ್ದು ಅವರಿಗೆ ಧನಸಹಾಯ ಒದಗಿಸಿ ಬಂಟ್ವಾಳದ ಉದ್ಯಮಿಯೊಬ್ಬರು ಉದಾರತೆ ಮೆರೆದಿದ್ದಾರೆ.

ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ಎರಕಳ ಮೂಲದ ಉದ್ಯಮಿ ಎರಕಳ ರಘುನಾಥ ಸೋಮಯಾಜಿ 100 ಜನರ ಅಕೌಂಟ್​ಗೆ ತಲಾ 5 ಸಾವಿರ ರೂಪಾಯಿ ಹಾಕಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಬ್ರಾಹ್ಮಣ ಸಮುದಾಯದ ಅರ್ಚಕರ ಸಹಾಯಕರು, ಅಡುಗೆ ಸಹಾಯಕರು, ಅಡುಗೆಯವರ ಜೀವನಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details