ಕರ್ನಾಟಕ

karnataka

ಜ.31ರಂದು ಉಜಿರೆಯಲ್ಲಿ ಬಿಜೆಪಿ ಅಭಿನಂದನಾ ಸಮಾರಂಭ: ಈಶ್ವರಪ್ಪ, ಕಟೀಲ್ ಉಪಸ್ಥಿತಿ

ಶಾಸಕ ಹರೀಶ್ ಪೂಂಜಾ, ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಜೆಪಿ ಅಭಿನಂದನಾ ಸಮಾರಂಭದ ಪೂರ್ವಸಿದ್ಧತೆ ಪರಿಶೀಲಿಸಿದರು.

By

Published : Jan 29, 2021, 10:46 AM IST

Published : Jan 29, 2021, 10:46 AM IST

BJP congratulating  ceremony at Ujire Sri Ratnavarma Hegde Stadium
ಜ.31ರಂದು ಉಜಿರೆಯಲ್ಲಿ ಬಿಜೆಪಿ ಅಭಿನಂದನಾ ಸಮಾರಂಭ: ಈಶ್ವರಪ್ಪ, ಕಟೀಲ್ ಉಪಸ್ಥಿತಿ

ಉಜಿರೆ (ದಕ್ಷಿಣಕನ್ನಡ):ಜ.31ರಂದು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ‌ಭಾಗವಹಿಸಲಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ಜ.31ರಂದು ಉಜಿರೆಯಲ್ಲಿ ಬಿಜೆಪಿ ಅಭಿನಂದನಾ ಸಮಾರಂಭ: ಈಶ್ವರಪ್ಪ, ಕಟೀಲ್ ಉಪಸ್ಥಿತಿ

ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಪೂರ್ವಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಗ್ರಾ.ಪಂ.ಚುನಾವಣೆ ವಿಜೇತರು, ಸ್ಪರ್ಧಿಗಳು ಹಾಗೂ ಕಾರ್ಯಕರ್ತರಿಗೆ ಸನ್ಮಾನಿಸಲಾಗುವುದು. ಜೊತೆಗೆ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಸಭೆ ನಡೆಯಲಿದೆ‌ ಎಂದರು.

ಉಜಿರೆ ‌ಶ್ರೀ ಜನಾರ್ದನ ದೇಗುಲದಿಂದ ಸಭಾ ಕಾರ್ಯಕ್ರಮ‌ ನಡೆಯುವ ಸ್ಥಳಕ್ಕೆ ಬೃಹತ್ ಮೆರವಣಿಗೆ ನಡೆಯಲಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ. ಉಜಿರೆ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಪೂರ್ವತಯಾರಿ ನಡೆಯುತ್ತಿದೆ ಎಂದು ಮಾಹಿತಿ ‌ನೀಡಿದರು.

ಸಮಾರಂಭದಲ್ಲಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಚಿವ ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ABOUT THE AUTHOR

...view details