ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸವಣೂರು ರಸ್ತೆಯ ಮುಕ್ಕೂರು ಬಳಿ ಬೈಕ್ಗಳೆರಡರ ಮಧ್ಯೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಬೈಕ್ಗಳ ನಡುವೆ ಮುಖಾಮುಖಿ.. ಓರ್ವ ಸ್ಥಳದಲ್ಲಿಯೇ ಸಾವು.. - Bike accident
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸವಣೂರು ರಸ್ತೆಯ ಮುಕ್ಕೂರು ಬಳಿ ಬೈಕ್ಗಳೆರಡರ ಮಧ್ಯೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
![ಬೈಕ್ಗಳ ನಡುವೆ ಮುಖಾಮುಖಿ.. ಓರ್ವ ಸ್ಥಳದಲ್ಲಿಯೇ ಸಾವು..](https://etvbharatimages.akamaized.net/etvbharat/prod-images/768-512-4237607-thumbnail-3x2-netjpg.jpg)
ಪುರುಷೋತ್ತಮ ಗೌಡ ಅಡ್ಯತಕಂಡ (42) ಮೃತ ದುರ್ದೈವಿ.
ಬೈಕ್ ಸವಾರ ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ಪುರುಷೋತ್ತಮಗೌಡ (42) ಮೃತ ದುರ್ದೈವಿ. ಪುರುಷೋತ್ತಮ ಗೌಡ ಅವರು ಮುಕ್ಕೂರು ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಇದರ ಸ್ಥಾಪಕ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು. ನಿನ್ನೆ ರಾತ್ರಿ ಅಪಘಾತ ಸಂಭವಿಸಿದ್ದು, ಇನ್ನೋರ್ವ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.