ಕರ್ನಾಟಕ

karnataka

By

Published : May 12, 2021, 9:37 PM IST

ETV Bharat / state

ಪಯಸ್ವಿನಿ ನದಿಯಲ್ಲಿ ಮುಳುಗಿ ಬಿಹಾರ ಮೂಲದ ಯುವಕ ಸಾವು

ಸುಳ್ಯದ ಅರಂಬೂರಿನ ಪ್ರೀತಂ ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ ಯುವಕರು ಮೇ 11ರಂದು ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕದಲ್ಲಿ ಪಯಸ್ವಿನಿ ನದಿಗೆ ಇಳಿದಿದ್ದರು. ಈ ವೇಳೆ ಅವಘಡ ಸಂಭವಿಸಿತ್ತು.

ಪಯಸ್ವಿನಿ ನದಿಯಲ್ಲಿ ಮುಳುಗಿ ಬಿಹಾರ ಮೂಲದ ಯುವಕ ಮೃತ್ಯು ಸಾವು
ಪಯಸ್ವಿನಿ ನದಿಯಲ್ಲಿ ಮುಳುಗಿ ಬಿಹಾರ ಮೂಲದ ಯುವಕ ಮೃತ್ಯು ಸಾವು

ಸುಳ್ಯ (ದಕ್ಷಿಣ ಕನ್ನಡ):ಸುಳ್ಯದ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತದೇಹವನ್ನು ಪೈಚಾರಿನ ಮುಳುಗು ತಜ್ಞರ ತಂಡ ನದಿಯಿಂದ ಹೊರಕ್ಕೆ ತೆಗೆದಿದ್ದಾರೆ.

ಇದೀಗ ಯುವಕನ ಗುರುತು ಪತ್ತೆಯಾಗಿದ್ದು, ಮೃತಪಟ್ಟವರು ಬಿಹಾರ ಮೂಲದ ಕುಂದನ್ ಎಂದು ತಿಳಿದು ಬಂದಿದೆ.

ಸುಳ್ಯದ ಅರಂಬೂರಿನ ಪ್ರೀತಂ ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ ಯುವಕರು ಮೇ 11ರಂದು ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕದಲ್ಲಿ ಪಯಸ್ವಿನಿ ನದಿಗೆ ಇಳಿದಿದ್ದರು. ಈ ವೇಳೆ ಓರ್ವ ನೀರಿನಿಂದ ಮೇಲೆ ಬರಲಾಗದೇ ಮುಳುಗಿದ್ದ, ಯುವಕರು ಎಷ್ಟೇ ಹುಡುಕಾಡಿದರೂ ಆತನ ಸುಳಿವು ಸಿಕ್ಕಿರಲಿಲ್ಲ.

ABOUT THE AUTHOR

...view details