ಕರ್ನಾಟಕ

karnataka

ETV Bharat / state

ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತಚಂದನ ₹ 28 ಕೋಟಿಗೆ ಬಿಡ್.. 3 ಪ್ರತಿಷ್ಠಿತ ಏಜೆನ್ಸಿಗಳಿಂದ ಖರೀದಿ

2012 ರ ಆಗಸ್ಟ್​ 24 ರಂದು ನವಮಂಗಳೂರು ಬಂದರು ಮೂಲಕ ದುಬೈಗೆ ಕಳ್ಳಸಾಗಣೆ ಮಾಡಲು ಕಂಟೈನರ್‌ನಲ್ಲಿ ತುಂಬಿಸಿಡಲಾಗಿದ್ದ 5,810 ಕೆ.ಜಿ. ತೂಕದ ರಕ್ತಚಂದನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈಗ ಇದನ್ನು ಬಿಡ್​ ಮೂಲಕ 3 ಪ್ರತಿಷ್ಠಿತ ಏಜೆನ್ಸಿಗಳು ಖರೀದಿ ಮಾಡಿವೆ.

By ETV Bharat Karnataka Team

Published : Sep 7, 2023, 12:14 PM IST

red sandalwood
ರಕ್ತಚಂದನ

ಮಂಗಳೂರು : 2012 ರಿಂದ 2022 ರವರೆಗೆ ನಗರದಿಂದ ವಿದೇಶಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಮಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತಚಂದನವನ್ನು ಹರಾಜು ಮಾಡಲಾಗಿದೆ. ಈ ಮೌಲ್ಯವನ್ನು ಆನ್‌ಲೈನ್‌ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ಬಿಡ್​ನಲ್ಲಿ ಖರೀದಿಸಿವೆ.

2012 ರಿಂದ 2023ರ ವರೆಗೆ ನಾಲ್ಕು ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು‌. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ರಕ್ತಚಂದನ ಇದಾಗಿದ್ದು, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆಯು ಆನ್‌ಲೈನ್ ಮೂಲಕ ಹರಾಜು ನಡೆಸಿದೆ.

ಒಟ್ಟು 2,094 ದಿಮ್ಮಿಗಳನ್ನೊಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಏಜೆನ್ಸಿಗಳು ಹರಾಜಿನಲ್ಲಿ ಖರೀದಿಸಿವೆ. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್‌ ಗಳಾಗಿ ವಿಂಗಡಣೆ ಮಾಡಲಾಗಿತ್ತು. ಒಟ್ಟು 18 ಲಾಟ್‌ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿಯು 10 ಲಾಟ್‌ಗೆ 14.5 ಕೋಟಿ ರೂ. ಬಿಡ್​ ಮಾಡಿದ್ದು, ಯಮಾ ರಿಬನ್ಸ್ ಏಜೆನ್ಸಿಯು 4.2 ಕೋಟಿ ರೂ. ಬಿಡ್ ಜೊತೆಗೆ 3 ಲಾಟ್​ಗೆ 1.6 ಕೋಟಿ ರೂ. ನೀಡಿ ಅಕ್ಷಾ ಏಜೆನ್ಸಿ ಖರೀದಿಸಿದೆ.ಮೂರು ಬಿಡ್‌ಗಳ ತೆರಿಗೆ ಸೇರಿ ಒಟ್ಟು ಮೊತ್ತ 28 ಕೋಟಿ ರೂ. ಆಗಿದೆ. ರಕ್ತಚಂದನಕ್ಕೆ ಚೀನಾ, ದುಬೈ, ಜಪಾನ್ ಸೇರಿದಂತೆ ಇತರೆ ದೇಶಗಳಲ್ಲಿ ಬೇಡಿಕೆಯಿದ್ದು, ಖರೀದಿ ಮಾಡಿದ ಕಂಪನಿ ಅಲ್ಲಿಗೆ ಇದನ್ನು ಸಾಗಣೆ ಮಾಡಲಿದೆ.

ಇದನ್ನೂ ಓದಿ :ಮೇಲೆ ಟೊಮೆಟೊ ಬಾಕ್ಸ್​, ಕೆಳಗೆ ರಕ್ತಚಂದನವಿಟ್ಟು ಸಾಗಣೆ.. ರೆಡ್​ ಸ್ಯಾಂಡಲ್ ಸ್ಮಗ್ಲಿಂಗ್​ ಪತ್ತೆ ಮಾಡಿದ ಸ್ನೀಪರ್​ ಡಾಗ್​ ​

2012 ಆ. 24 ರಂದು ನವಮಂಗಳೂರು ಬಂದರು ಮೂಲಕ ದುಬೈಗೆ ಕಳ್ಳಸಾಗಣೆ ಮಾಡಲು ಕಂಟೈನರ್‌ನಲ್ಲಿ ತುಂಬಿಸಿಡಲಾಗಿದ್ದ 5,810 ಕೆ.ಜಿ. ತೂಕದ ರಕ್ತಚಂದನವನ್ನು ಮಂಗಳೂರು ಬಂದರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 2014 ಆ. 21 ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 2020 ರ ಜ.10 ರಂದು ಥೈಲ್ಯಾಂಡ್​ಗೆ ಸಾಗಿಸಲು ಯತ್ನಿಸುತ್ತಿದ್ದ 2.20 ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. 2022 ರ ಜೂ.3 ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ 4.14 ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. ಈ ನಾಲ್ಕು ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾದ ರಕ್ತಚಂದನವನ್ನು ಹರಾಜು ಮಾಡಲಾಗಿದೆ.

ಇದನ್ನೂ ಓದಿ :ಪೊಲೀಸರ ಭರ್ಜರಿ ಬೇಟೆ : ರಕ್ತ ಚಂದನ ಸಾಗಿಸುತ್ತಿದ್ದ 13 ಅಂತಾರಾಜ್ಯ ಕಳ್ಳರ ಬಂಧನ

ABOUT THE AUTHOR

...view details