ಕರ್ನಾಟಕ

karnataka

ETV Bharat / state

ಬಂಟ್ವಾಳ: ಕಾರ್ಮಿಕ ಸಂಘಟನೆಗಳಿಂದ ಹಕ್ಕೊತ್ತಾಯ ಪ್ರದರ್ಶನ - Bhantwala protest news

ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಸಂಬಳ ಸಿಗದೆ ಅವರ ಕುಟುಂಬ ಉಪವಾಸ ಬಿದ್ದಿದ್ದು, ಸರ್ಕಾರದ ಪರಿಹಾರ ನಿರ್ದಿಷ್ಟ ಫಲಾನುಭವಿಗಳಿಗೆ ದೊರಕಿಲ್ಲ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಹಕ್ಕೊತ್ತಾಯ ಪ್ರದರ್ಶನ ನಡೆಸಲಾಯಿತು.

Protest
Protest

By

Published : Jul 3, 2020, 5:39 PM IST

ಬಂಟ್ವಾಳ: ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಸಂಬಳ ಸಿಗದೆ ಅವರ ಕುಟುಂಬ ಉಪವಾಸ ಬಿದ್ದಿದ್ದು, ಸರ್ಕಾರದ ಪರಿಹಾರ ನಿರ್ದಿಷ್ಟ ಫಲಾನುಭವಿಗಳಿಗೆ ದೊರಕಿಲ್ಲ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಜೆಸಿಟಿಯು ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಹಕ್ಕೊತ್ತಾಯ ಪ್ರದರ್ಶನ ನಡೆಸಲಾಯಿತು.

ಬಂಟ್ವಾಳದ ಬಿ.ಸಿ.ರೋಡ್ ಮಿನಿ ವಿಧಾನಸೌಧದ ಎದುರು ಹಕ್ಕೊತ್ತಾಯ ಪ್ರದರ್ಶನ ನಡೆಸಲಾಯಿತು. ಈ ವೇಳೆ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಶೇಖರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿದರು. ನಂತರ ಸುಮಾರು 15 ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಪ್ರಧಾನ ಮಂತ್ರಿಗೆ ಬಂಟ್ವಾಳ ತಹಶೀಲ್ದಾರ್ ಮುಖೇನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ, ಎಐಟಿಯುಸಿ ತಾಲೂಕು ಮುಖಂಡರಾದ ಬಿ.ಬಾಬು ಭಂಡಾರಿ, ಸರಸ್ವತಿ ಕಡೇಶ್ವಾಲ್ಯ, ಶಮಿತಾ, ಹರ್ಷಿತ್, ಸರೋಜಿನಿ ಕುರಿಯಾಳ ಹಾಗೂ ಸಿಐಟಿಯು ತಾಲೂಕು ಮುಖಂಡರಾದ ಲೋಲಾಕ್ಷಿ, ಟೂರಿಸ್ಟ್ ವಾಹಕ ಚಾಲಕರ ಸಂಘಟನೆ (ಸಿಐಟಿಯು) ಕಾರ್ಯದರ್ಶಿ ಗುಣಕರ್, ಭಾರತೀಯ ಮಹಿಳಾ ಒಕ್ಕೂಟ ಅಧ್ಯಕ್ಷೆ ಭಾರತಿ ಪ್ರಶಾಂತ್, ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಯುವ ವಕೀಲ ತುಳಸೀದಾಸ್ ವಿಟ್ಲ, ಡಿವೈಎಫ್ಐ ಜಿಲ್ಲಾ ಮುಖಂಡ ಮೊಹಮ್ಮದ್ ಇಕ್ಬಾಲ್ ಮುಂತಾದವರು ಭಾಗವಹಿಸಿದ್ದರು.

ABOUT THE AUTHOR

...view details