ಕರ್ನಾಟಕ

karnataka

ETV Bharat / state

ಈಟಿವಿ ಭಾರತ Impact: ಪುತ್ತೂರಿನ ಅಜ್ಜಿಗೆ ಬಂತು ಪಿಂಚಣಿ ದುಡ್ಡು - pension received

ಈಟಿವಿ ಭಾರತದಲ್ಲಿ ಪ್ರಕಟಗೊಂಡ ವರದಿ ಗಮನಿಸಿದ ಅಧಿಕಾರಿಯೊಬ್ಬರು ಫಲಾನುಭವಿಗಳಿಗೆ ಸೇರಬೇಕಾದ ಸೇವೆಯನ್ನು ತಲುಪಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

beneficiary-received-his-pension-after-etv-bharat-report
ಅಜ್ಜಿ ಬಾಳಕ್ಕ

By

Published : Apr 29, 2020, 5:10 PM IST

ಪುತ್ತೂರು (ದಕ್ಷಿಣ ಕನ್ನಡ):ಎರಡು ತಿಂಗಳಿನಿಂದ ಪಿಂಚಣಿ ಹಣ ಬಾರದಿರುವ ಬಗ್ಗೆ ಈಟಿವಿ ಭಾರತದಲ್ಲಿ ಬಂದ ಸುದ್ದಿಗೆ ಸ್ಪಂದಿಸಿದ ಅಂಚೆ ಇಲಾಖೆ ಫಲಾನುಭವಿಗಳಿಗೆ ಪಿಂಚಣಿ ಹಣ ಮುಟ್ಟಿಸುವ ಕಾರ್ಯ ಮಾಡಿದೆ.

ಇದನ್ನೂ ಓದಿ: 2 ತಿಂಗಳಿಂದ ಬಂದಿಲ್ಲ ಪಿಂಚಣಿ ಹಣ: ಸಂಕಷ್ಟದಲ್ಲಿ ಫಲಾನುಭವಿಗಳು

ಏ. 23 ರಂದು ಈಟಿವಿ ಭಾರತದಲ್ಲಿ '2 ತಿಂಗಳಿಂದ ಬಂದಿಲ್ಲ ಪಿಂಚಣಿ ಹಣ; ಸಂಕಷ್ಟದಲ್ಲಿ ಫಲಾನುಭವಿಗಳು'ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಈ ವರದಿ ಗಮನಿಸಿದ ಅಂಚೆ ಇಲಾಖೆ ನಾಲ್ಕು ತಿಂಗಳಿಂದ ಪಿಂಚಣಿ ಸಿಗದಿರುವ ಬಗ್ಗೆ ಸಂಕಷ್ಟ ತೋಡಿಕೊಂಡ ಅಜ್ಜಿ ಬಾಳಕ್ಕ ಅವರಿಗೆ ಪಿಂಚಣಿ ಹಣವನ್ನು ತಲುಪಿಸಿದೆ.

ಅಜ್ಜಿ ಬಾಳಕ್ಕ

ಈ ಸುದ್ದಿ ಗಮನಿಸಿದ ಮಂಗಳೂರು ವಲಯ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಪುತ್ತೂರು ವಲಯದ ಅಂಚೆ ವಿಭಾಗಕ್ಕೆ ಮಾಹಿತಿ ನೀಡಿ ಅಜ್ಜಿಯ ಖಾತೆಗೆ ಪಿಂಚಣಿ ಹಣ ಬರುವಂತೆ ಮಾಡಿದ್ದಾರೆ.

ಪುತ್ತೂರು ತಾಲೂಕಿನ ಪಡೀಲ್‌ನಲ್ಲಿರುವ ಅಜ್ಜಿ ಮನೆಗೆ ಹೋಗಿ ಅಂಚೆಯಣ್ಣನೇ ನೇರವಾಗಿ ಈ ಹಣ ತಲುಪಿಸಿದ್ದಾರೆ. ಕೈಯಲ್ಲಿ ದುಡ್ಡಿಲ್ಲದೆ ಹಸಿವಿನಿಂದ ಇದ್ದ ಅಜ್ಜಿಗೆ ಇದೀಗ ಹಣ ತಲುಪಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details