ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ - ಈಟಿವಿ ಭಾರತ ಕನ್ನಡ

ಬ್ಯಾಂಕ್ ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

bank-manager-commits-suicide-in-mangaluru
ಮಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ

By

Published : Oct 14, 2022, 6:52 PM IST

ಮಂಗಳೂರು:ನಗರದ ಬಿಜೈನಲ್ಲಿರುವ ಕೆನರಾ ಬ್ಯಾಂಕ್​ನಲ್ಲಿ ಮ್ಯಾನೇಜರ್‌ ಆಗಿ ಉದ್ಯೋಗದಲ್ಲಿದ್ದ ಪದ್ಮಾಕ್ಷಿ (52) ಎಂಬುವರು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪದ್ಮಾಕ್ಷಿ ಅವರು ನಗರದ ಶಕ್ತಿನಗರದ ನಿವಾಸಿಯಾಗಿದ್ದರು.

ಯೆಯ್ಯಾಡಿ ಶರ್ಬತ್‌ ಕಟ್ಟೆ ಬಳಿ ಇತ್ತೀಚೆಗೆ ಹೊಸದಾಗಿ ಮನೆ ಖರೀದಿಸಿದ್ದರು. ಇದೇ ಮನೆಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ 9.30ರ ವೇಳೆಗೆ ಮನೆಯಿಂದ ಬ್ಯಾಂಕ್‌ಗೆ ಎಂದು ಹೊರಟವರು ಬ್ಯಾಂಕ್‌ಗೆ ಹೋಗದೇ, ನೇರವಾಗಿ ಹೊಸದಾಗಿ ಖರೀದಿಸಿದ ಮನೆಗೆ ತೆರಳಿದ್ದಾರೆ.

ಬಳಿಕ ಅಲ್ಲಿ ನೇಣು ಬಿಗಿದುಕೊಂದು ಬ್ಯಾಂಕ್ ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಚೇರಿಯಲ್ಲಿ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅನಸ್ತೇಶಿಯಾ ಇಂಜೆಕ್ಷನ್​ ಕೊಟ್ಟ 2ನೇ ಪತ್ನಿ: 33 ದಿನ ಕೋಮಾಕ್ಕೆ ಜಾರಿ ವೈದ್ಯ ಪತಿ ಸಾವು

ABOUT THE AUTHOR

...view details