ಕರ್ನಾಟಕ

karnataka

By

Published : Jan 15, 2020, 11:50 PM IST

ETV Bharat / state

ಮಾನವೀಯತೆ ಮೆರೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು.. ವಿಡಿಯೋ ವೈರಲ್​

ಮಂಗಳೂರು, ಸಿಎಎ ಪ್ರತಿಭಟನಾ ಸಮಾವೇಶದ ಕಾವಿನ ಮಧ್ಯೆಯೂ ಮಾನವೀಯತೆ ಮೆರೆದ ಘಟನೆಯೊಂದು ಬೆಂಗಳೂರು - ಮಂಗಳೂರು ರಾ.ಹೆ.75ರ ರಸ್ತೆಯ ಅಡ್ಯಾರ್-ಕಣ್ಣೂರು ಬಳಿ ನಡೆದಿದೆ.

auto-rickshaw-shifted-one-road-to-another-road
ಮಾನವೀಯತೆ ಮೆರೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು

ಮಂಗಳೂರು : ಸಿಎಎ ಪ್ರತಿಭಟನಾ ಸಮಾವೇಶದ ಕಾವಿನ ಮಧ್ಯೆಯೂ ಮಾನವೀಯತೆ ಮೆರೆದ ಘಟನೆಯೊಂದು ಬೆಂಗಳೂರು - ಮಂಗಳೂರು ರಾ.ಹೆ.75 ರ ರಸ್ತೆಯ ಅಡ್ಯಾರ್-ಕಣ್ಣೂರು ಬಳಿ ನಡೆದಿದೆ.

ನಗರದ ಹೊರವಲಯದ ಅಡ್ಯಾರ್-ಕಣ್ಣೂರಿನಲ್ಲಿ ಬುಧವಾರ ನಡೆದ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಲಕ್ಷಕ್ಕೂ ಅಧಿಕ ಮಂದಿ ರಸ್ತೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಈ ಜನಸಂದಣಿಯ ನಡುವೆ ಸಿಕ್ಕಿ ಹಾಕಿಕೊಂಡಿದೆ, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ರಿಕ್ಷಾ ಮುಂದೆ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ರಿಕ್ಷಾದೊಳಗಿದ್ದ ಗರ್ಭಿಣಿಯು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಇದನ್ನು ಗಮನಿಸಿದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು, ಒಂದು ರಸ್ತೆಯಲ್ಲಿದ್ದ ಆಟೊರಿಕ್ಷಾವನ್ನು ಡಿವೈಡರ್​ನ ಆಚೆ ರಸ್ತೆಗೆ ಎತ್ತಿಟ್ಟು ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಾನವೀಯತೆ ಮೆರೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು

21 ಸೆಕೆಂಡ್ ಇರುವ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ABOUT THE AUTHOR

...view details