ಸುಳ್ಯ(ದಕ್ಷಿಣ ಕನ್ನಡ): ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಚೇರಿಗೆ ನುಗ್ಗಿಗ್ರಾಮ ಲೆಕ್ಕಿಗನ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಸವಣೂರು ಜಂಕ್ಷನ್ನಲ್ಲಿ ಬುಧವಾರ ನಡೆದಿದೆ.
ಸವಣೂರು/ಪುಣ್ಷಪ್ಪಾಡಿ ಗ್ರಾಮ ಕರಣಿಕರರಾದ ಬಸವರಾಜ್ ಎಂಬುವರ ಮೇಲೆ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಹಲ್ಲೆ, ಕೊಲೆ ಬೆದರಿಕೆ, ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.