ಕರ್ನಾಟಕ

karnataka

By

Published : Jul 16, 2019, 8:12 PM IST

ETV Bharat / state

ಜಾಮೀನು ಸಿಕ್ಕರೂ ಜೈಲಿನಿಂದ ಹೊರ ಬರಲಾಗದ ಅಲ್ಪಸಂಖ್ಯಾತ ಕೈದಿಗಳಿಗೆ ನೆರವು

ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 15ರಷ್ಟು ಇದ್ದರೆ ಜೈಲಿನಲ್ಲಿ ಶೇ. 30ರಿಂದ 35ರಷ್ಟು ಜನ ಇದ್ದಾರೆ. ಜೈಲಿನ ಅಂಕಿ-ಅಂಶ ಪರಿಶೀಲನೆ ಮಾಡಿದಾಗ ಹಲವು ಮಂದಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಬಡ ಕೈದಿಗಳು ಹಣಕಾಸಿನ ಮುಗ್ಗಟ್ಟಿನಿಂದ ಶ್ಯೂರಿಟಿ ನೀಡಲಾಗದೆ ಜೈಲಿನಲ್ಲೇ ಇರುವಂತಹ ಪರಿಸ್ಥಿತಿ ಇದೆ. ಅಂತವರಿಗೆ ಅಲ್ಪಸಂಖ್ಯಾತ ಆಯೋಗದಿಂದ ನೆರವು ನೀಡಲಾಗುವುದು ಎಂದು ಆಯೋಗದ ಅಧ್ಯಕ್ಷ ಜಿ.ಎ.ಬಾವ ಹೇಳಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ ಬಾವ

ಮಂಗಳೂರು: ಸಣ್ಣಪುಟ್ಟ ಪ್ರಕರಣದಲ್ಲಿ ಜೈಲುಪಾಲಾಗಿ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲಾಗದ ಕೈದಿಗಳಿಗೆ ಅಲ್ಪಸಂಖ್ಯಾತ ಆಯೋಗದಿಂದ ನೆರವು‌ ನೀಡಲು ಚಿಂತನೆ ನಡೆಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಜಿ.ಎ.ಬಾವ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವ

ಮಂಗಳೂರಿನಲ್ಲಿ ಮಾತನಾಡಿದ ಅವರು, ಬೆಂಗಳೂರು ಸೆಂಟ್ರಲ್ ಜೈಲಿನ ಕೈದಿಗಳಲ್ಲಿ ಶೇ. 30ರಿಂದ 35ರಷ್ಟು ಮಂದಿ ಅಲ್ಪಸಂಖ್ಯಾತರಿದ್ದಾರೆ. ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 15ರಷ್ಟು ಇದ್ದರೆ, ಜೈಲಿನಲ್ಲಿ ಶೇ. 30ರಿಂದ 35 ಜನ ಇದ್ದಾರೆ. ಜೈಲಿನ ಅಂಕಿ-ಅಂಶ ಪರಿಶೀಲನೆ ಮಾಡಿದಾಗ ಹಲವು ಮಂದಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದರೂ ಬಡ ಕೈದಿಗಳು ಹಣಕಾಸಿನ ಮುಗ್ಗಟ್ಟಿನಿಂದ ಶ್ಯೂರಿಟಿ ನೀಡಲಾಗದೆ ಜೈಲಿನಲ್ಲೇ ಇರುವಂತಹ ಪರಿಸ್ಥಿತಿ ಇದೆ. ಇವುಗಳಲ್ಲಿ ಸಣ್ಣಪುಟ್ಟ ಪ್ರಕರಣದಲ್ಲಿ ಜೈಲುಪಾಲಾಗಿರುವ ಕೈದಿಗಳನ್ನು ಗುರುತಿಸಿ ಅವರಿಗೆ ನೆರವು ನೀಡಲು ವಕೀಲರ ಮೂಲಕ ಆಯೋಗ ಪ್ರಯತ್ನಿಸಲಿದೆ ಎಂದರು.

For All Latest Updates

TAGGED:

ABOUT THE AUTHOR

...view details