ಸುಳ್ಯ (ದಕ್ಷಿಣ ಕನ್ನಡ):ಕಲಾವಿದನೋರ್ವನಿಗೆ ವಿಶಿಷ್ಟ ಕಲ್ಪನೆಯಿದ್ದಲ್ಲಿ ಯಾವ ರೀತಿಯಲ್ಲಿ ಬೇಕಾದರೂ ಕಲಾಕೃತಿ ಮೂಡಲು ಸಾಧ್ಯ ಎಂಬುದಕ್ಕೆ ಈ ವಿಡಿಯೋ ಮತ್ತು ಈ ಯವಕ ನಿದರ್ಶನ. ಸುಳ್ಯದ ಶಶಿ ಅಡ್ಕರ್ ಎಂಬ ಯುವಕ ಇಂಗು ಎಲೆ ಮತ್ತು ತೆಂಗಿನ ಗರಿ ಕಡ್ಡಿಯಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿಯೊಂದನ್ನು ರಚಿಸಿದ್ದಾನೆ.
ಇಂಗು ಎಲೆಯನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸಿ ಅದನ್ನು ಪೊರಕೆ ಕಡ್ಡಿಗೆ ಅಂಟಿಸಿ, ಬಳಿಕ ಮರಳು ತುಂಬಿದ ಬಕೆಟ್ನಲ್ಲಿ ಇಡಲಾಗಿದೆ. ಸಾಮಾನ್ಯವಾಗಿ ನೋಡುವಾಗ ಏನೋ ಐದು ಕಡ್ಡಿಗಳನ್ನು ಇಡಲಾಗಿದೆ ಎಂದು ಅನಿಸುತ್ತದೆ. ಆದರೆ ಒಂದು ವಿಭಿನ್ನ ಕೋನದಲ್ಲಿ ನೋಡಿದಾಗ ಸ್ವಾಮಿ ವಿವೇಕಾನಂದರ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ. ಇದನ್ನು ಸುಂದರವಾಗಿ ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆಯನ್ನು ನಿನ್ನೆಯಷ್ಟೇ ಆಚರಿಸಲಾಗಿದ್ದು, ಈ ಶುಭ ಸಂದರ್ಭಕ್ಕಾಗಿ ಕಲಾವಿದ ಶಶಿ ಅಡ್ಕರ್ ಈ ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಾರೆ.