ಪುತ್ತೂರು(ದಕ್ಷಿಣ ಕನ್ನಡ):ಉದ್ಯಮಿಯೋರ್ವರಿಗೆ ವಿವಿಧ ಮೊಬೈಲ್ಗಳಿಂದ ಕರೆ ಮಾಡಿ ಬೆದರಿಕೆಯೊಡ್ಡಿ, ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ ಇಬ್ಬರು ರೌಡಿ ಶೀಟರ್ಗಳನ್ನು ಸಂಪ್ಯ ಠಾಣಾ ಎಸ್ಐ ಉದಯ ರವಿ ನೇತೃತ್ವದ ಪೊಲೀಸರ ತಂಡ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದೆ.
ಬಂಟ್ವಾಳ ತಾಲೂಕು ಗೋಳ್ತಮಜಲು ಕಲ್ಲಡ್ಕ ಮಸೀದಿ ಬಳಿಯ ನಿವಾಸಿ ಅಬ್ದುಲ್ಲಾ ಅವರ ಪುತ್ರ ಖಲಂದರ್ ಶರೀಫ್ಶಾಫಿ ಹಾಗೂ ಮಂಗಳೂರು ಮಂಜನಾಡಿ ಕುಚ್ಚಿಗದ್ದೆ ಹಂಝರವರ ಪುತ್ರ ಹಸನಬ್ಬಂಹಸನ್ ಅಚ್ಚುಚುನ್ ಬಂಧಿತರು. ಆರೋಪಿಗಳು ರೌಡಿಶೀಟರ್ಗಳು ಎಂದು ತಿಳಿದುಬಂದಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯ ನಿವಾಸಿ ದರ್ಬೆಯಲ್ಲಿರುವ ನಸೀಬ್ ಬೋರ್ವೆಲ್ ಮಾಲೀಕ ಅಬೂಬಕ್ಕರ್ ಮುಲಾರ್ ಅವರಿಗೆ, ಕಳೆದ ಒಂದು ವಾರದಿಂದ ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್ಗಳಿಂದ ಕರೆ ಮಾಡಿ, 'ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ. ಅವನನ್ನು ಬಿಡಿಸಲು ಹಣ ಬೇಕು, ಅವನನ್ನು ಬಿಡಿಸಲು ರೂ. 13,00,000/- ತಗಲುತ್ತದೆ. ಅದಕ್ಕಾಗಿ ನೀನು ಹಣ ಕೊಡಬೇಕು, 2 ದಿನದೊಳಗೆ ರೂ. 3,50,000/- ಹಣ ರೆಡಿ ಮಾಡಬೇಕು, ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ. ನೀನು ಜೀವಂತ ಬದುಕಲು ಸಾಧ್ಯವಿಲ್ಲ’ ಎಂದು ತಮಗೆ ಜೀವ ಬೆದರಿಕ ಒಡ್ಡಿರುವುದಾಗಿ ಉದ್ಯಮಿ ಅಬೂಬಕ್ಕರ್ ಮುಲಾರ್ ಜ.5ರಂದು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.