ಕರ್ನಾಟಕ

karnataka

ಅಡಿಕೆ ಉದುರುವ ಸಮಸ್ಯೆ ಹೆಚ್ಚಳ: ಅಡಿಕೆ ತೋಟಕ್ಕೆ ಸಿಪಿಸಿಆರ್​ಐ ವಿಜ್ಞಾನಿಗಳ ಭೇಟಿ

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ವಿಟ್ಲದ ಸಿಪಿಸಿಆರ್​​​ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಕುರಿತು ಸೂಕ್ತ ಅದ್ಯಯನ ಹಾಗೂ ಪರಿಹಾರದ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿದ್ದರು. ಈ ಹಿನ್ನೆಲೆ ವಿಜ್ಞಾನಿಗಳು ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By

Published : Jul 5, 2020, 3:05 PM IST

Published : Jul 5, 2020, 3:05 PM IST

areca problem in puttur
ಸಿಪಿಸಿಆರ್​ಐ ವಿಜ್ಞಾನಿಗಳಿಂದ ಅಡಿಕೆ ತೋಟಕ್ಕೆ ಭೇಟಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಗುರು ಅಡಿಕೆ ಹೆಚ್ಚಾಗಿ ಉದುರುತ್ತಿರುವುದು ಹಾಗೂ ಸಿಂಗಾರ ಒಣಗುವ ಸಮಸ್ಯೆ ವಿಪರೀತವಾಗಿ ಕಂಡುಬಂದ ಹಿನ್ನೆಲೆ ಅಡಿಕೆ ತೋಟಗಳಿಗೆ ಸಿಪಿಸಿಐಆರ್​ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ವಿಟ್ಲದ ಸಿಪಿಸಿಆರ್​​​ಐ ವಿಜ್ಞಾನಿಗಳ ಗಮನಕ್ಕೆ ತಂದು, ಈ ಕುರಿತು ಸೂಕ್ತ ಅಧ್ಯಯನ ಹಾಗೂ ಪರಿಹಾರದ ಮಾರ್ಗ ಅಗತ್ಯವಾಗಿದೆ ಎಂದು ಅಡಿಕೆ ಬೆಳೆಗಾರರ ಪರವಾಗಿ ತಿಳಿಸಿದ್ದರು.

ಅಡಿಕೆ ತೋಟಕ್ಕೆಸಿಪಿಸಿಆರ್​ಐ ವಿಜ್ಞಾನಿಗಳ ಭೇಟಿ

ಇದಕ್ಕೆ ಸ್ಪಂದಿಸಿದ ವಿಜ್ಞಾನಿಗಳ ತಂಡ ಸುಳ್ಯ, ಪುತ್ತೂರು, ಕಡಬ ಪ್ರದೇಶದ ಕೆಲವು ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಅಡಿಕೆ ಸ್ಯಾಂಪಲ್​ಗಳನ್ನು ಪಡೆದು ಅಧ್ಯಯನ ನಡೆಸಿದ್ದಾರೆ.

ವಿಜ್ಞಾನಿಗಳ ತಂಡದಲ್ಲಿ ಸಸ್ಯ ಸಂತಾನೋತ್ಪತ್ತಿ ವಿಜ್ಞಾನಿ ಡಾ. ಎನ್. ಆರ್. ನಾಗರಾಜ, ಕೃಷಿ ಕೀಟಶಾಸ್ತ್ರ ವಿಜ್ಞಾನಿ ಡಾ. ಶಿವಾಜಿ ಹೌಸ್ರಾವ್ ಥೂಬ್ ಸೇರಿದಂತೆ ಮೊದಲಾದವರು ಇದ್ದರು.

ABOUT THE AUTHOR

...view details