ಕರ್ನಾಟಕ

karnataka

ETV Bharat / state

ಎನ್​ಆರ್​ಸಿ ಜಾರಿ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಲಿ: ಮಾಜಿ ಸಚಿವರ ಒತ್ತಾಯ

ರಕ್ಷಣಾ ಸಚಿವರು ದೇಶಾದ್ಯಂತ ಎನ್​ಆರ್​ಸಿ ಜಾರಿಗೊಳಿಸುವ ಬಗ್ಗೆ ಯೋಚನೆಯಿಲ್ಲ ಎನ್ನುತ್ತಾರೆ. ಗೃಹಮಂತ್ರಿಗಳು ಎನ್​ಆರ್​ಸಿ ಜಾರಿ ಮಾಡುತ್ತೇವೆ ಎನ್ನುತ್ತಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಸಿಎಎ- ಎನ್​ಆರ್​ಸಿ ಬಗ್ಗೆ ಸ್ಪಷ್ಟನೆ ಕೊಡಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಒತ್ತಾಯಿಸಿದ್ದಾರೆ.

By

Published : Jan 28, 2020, 9:49 PM IST

Former Minister UT Khader
ಯು.ಟಿ ಖಾದರ್, ಮಾಜಿ ಸಚಿವ

ಮಂಗಳೂರು:ದೇಶದಾದ್ಯಂತ ಎನ್​ ಆರ್​ಸಿ ಜಾರಿ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಎ ಕಾನೂನಿನ ಉದ್ದೇಶದಲ್ಲಿ ದುರುದ್ದೇಶವಿದೆ, ರಕ್ಷಣಾ ಸಚಿವರು ದೇಶಾದ್ಯಂತ ಎನ್​ಆರ್​ಸಿ ಜಾರಿಗೊಳಿಸುವ ಬಗ್ಗೆ ಯೋಚನೆಯಿಲ್ಲ ಎನ್ನುತ್ತಾರೆ. ಗೃಹಮಂತ್ರಿಗಳು ಎನ್​ಆರ್​ಸಿ ಜಾರಿ ಮಾಡುತ್ತೇವೆ ಎನ್ನುತ್ತಾರೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಸಿಎಎ- ಎನ್​ಆರ್​ಸಿ ಬಗ್ಗೆ ಸ್ಪಷ್ಟನೆ ಕೊಡಲಿ. ಸರ್ಕಾರಗಳು ದೇಶಕ್ಕೆ ಒಳಿತಾಗುವ ಕೆಲಸ ಮಾಡಬೇಕು ಎಂದರು.

ಯು.ಟಿ ಖಾದರ್, ಮಾಜಿ ಸಚಿವ

ಯಾವುದೇ ಕಾನೂನು ತರುವಾಗ ಎಲ್ಲರನ್ನೂ ಒಟ್ಟುಗೂಡಿಸುವಂತಿರಬೇಕು. ಅದು ಜನರಲ್ಲಿ ಭಯ ಹುಟ್ಟಿಸುವ ಕಾನೂನು ಆಗಬಾರದು. ಕಟ್ಟಪ್ಪಣೆ ಮೂಲಕ ಕಾನೂನು ಹೇರಲು ಸಾಧ್ಯವಿಲ್ಲ ಎಂದು ಕೇಂದ್ರದ ವಿರುದ್ಧ ಸಚಿವ ಯು ಟಿ ಖಾದರ್​ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details