ಮಂಗಳೂರು: ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಿ ಹೊರ ರಾಜ್ಯದವರಿಗೆ ಮಣೆ ಹಾಕಲಾಗಿದೆ ಎಂಬ ಜನಪ್ರತಿನಿಧಿಗಳ ಕಳವಳದ ಬಗ್ಗೆ ತನಿಖೆ ಆರಂಭಿಸಲಾಗುತ್ತದೆ. ಮುಖ್ಯ ಜಾಗೃತ ಅಧಿಕಾರಿ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೇಂದ್ರ ಜಾಗೃತ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಎಂಆರ್ಪಿಎಲ್ ತಿಳಿಸಿದೆ.
ಹೊರ ರಾಜ್ಯದವರಿಗೆ ಉದ್ಯೋಗ ನೀಡಿದ ಆರೋಪ: ತನಿಖೆ ಆರಂಭಿಸಿದ ಎಂಆರ್ಪಿಎಲ್ - ಎಂಆರ್ಪಿಎಲ್
ಮುಖ್ಯ ಜಾಗೃತ ಅಧಿಕಾರಿ ನೇತೃತ್ವದಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಿ ಹೊರ ರಾಜ್ಯದವರಿಗೆ ಮಣೆ ಹಾಕಲಾಗಿದೆ ಎಂಬ ಜನಪ್ರತಿನಿಧಿಗಳ ಕಳವಳದ ಬಗ್ಗೆ ತನಿಖೆ ಆರಂಭಿಸಲಾಗುತ್ತದೆ ಎಂದು ಎಂಆರ್ಪಿಎಲ್ ತಿಳಿಸಿದೆ.
![ಹೊರ ರಾಜ್ಯದವರಿಗೆ ಉದ್ಯೋಗ ನೀಡಿದ ಆರೋಪ: ತನಿಖೆ ಆರಂಭಿಸಿದ ಎಂಆರ್ಪಿಎಲ್ Allegations of employment to outsiders in MRPL](https://etvbharatimages.akamaized.net/etvbharat/prod-images/768-512-11927561-109-11927561-1622181443309.jpg)
ಸಂಬಂಧಿತ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನ್ಯಾಯಯುತ ಹಾಗೂ ಪಾರದರ್ಶಕ ಪ್ರಕ್ರಿಯೆಗೆ ಬದ್ಧತೆ ಪ್ರದರ್ಶಿಸಲಿದೆ. ಎಂಆರ್ಪಿಎಲ್ ಸಂಸ್ಥೆಯಲ್ಲಿ ಶೇ. 70ಕ್ಕಿಂತ ಅಧಿಕ ಉದ್ಯೋಗಿಗಳು ಕರ್ನಾಟಕದವರಾಗಿದ್ದಾರೆ. ಮ್ಯಾನೇಜ್ಮೆಂಟ್ ಹೊರತಾಗಿರುವ ವಿಭಾಗದ ಶೇ. 90ರಷ್ಟು ಸಿಬ್ಬಂದಿ ರಾಜ್ಯದವರಾಗಿದ್ದಾರೆ. ಕಂಪನಿ ಸ್ಥಾಪನೆಗೆ ಹಾಗೂ ವಿಸ್ತರಣೆಗಾಗಿ ಭೂಮಿ ನೀಡಿರುವ ಕುಟುಂಬಸ್ಥರ 600ಕ್ಕೂ ಅಧಿಕ ಸದಸ್ಯರಿಗೆ ಎಂಆರ್ಪಿಎಲ್ನಲ್ಲಿ ಉದ್ಯೋಗ ನೀಡಲಾಗಿದೆ.
ಕರ್ನಾಟಕದಲ್ಲಿನ ಎಂಆರ್ಪಿಎಲ್ನ ಚಟುವಟಿಕೆಗಳಲ್ಲಿ ಸುಮಾರು 150 ಕೋಟಿ ರೂ. ಪಾಲು ಸಲ್ಲಿಸಿದೆ. ಈ ಪೈಕಿ ದ.ಕ ಜಿಲ್ಲೆಯೊಂದಕ್ಕೇ 120 ಕೋಟಿ ರೂ. ನೀಡಿದೆ. ಕೋವಿಡ್ ಸೋಂಕಿನ ಭೀತಿಯ ನಡುವೆಯೂ ರಿಫೈನರಿಯನ್ನು ಸದಾ ನಡೆಸುತ್ತಾ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಎಲ್ಪಿಜಿಯನ್ನು ನಿರಂತರ ಪೂರೈಕೆ ಮಾಡುತ್ತಿದೆ ಎಂದು ಎಂಆರ್ಪಿಎಲ್ ತಿಳಿಸಿದೆ.