ಮಂಗಳೂರು: ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯರಾವ್ನನ್ನು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು.
ಬಾಂಬ್ ಪ್ರಕರಣ: ಆದಿತ್ಯರಾವ್ನನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ಸನ್ನಿವೇಶ ಮರು ಸೃಷ್ಟಿ - ಬಾಂಬರ್ ಅದಿತ್ಯ ರಾವ್
ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್ಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕರೆದುಕೊಂಡು ಬರಲಾಯಿತು.ಈ ವೇಳೆ ಆದಿತ್ಯ ರಾವ್ ಬಾಂಬ್ ಇರಿಸಿದ್ದ ಸ್ಥಳವನ್ನು ತೋರಿಸಿದ್ದಾನೆ.
ಆದಿತ್ಯರಾವ್
ಮಂಗಳೂರು ಏರ್ ಪೋರ್ಟ್ನಲ್ಲಿ ಬಾಂಬ್ ಇರಿಸಿ ಹೋದ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು, ಸ್ಥಳ ಮಹಜರು ನಡೆಸಿದರು. ಮಂಗಳೂರಿನ ಪಣಂಬೂರು ಸಹಾಯಕ ಆಯುಕ್ತರ ಕಚೇರಿಯಿಂದ ವಿಚಾರಣೆ ಬಳಿಕ ಏರ್ ಪೋರ್ಟ್ಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕರೆದುಕೊಂಡು ಬರಲಾಯಿತು.
ಅದಿತ್ಯ ರಾವ್, ಬಾಂಬ್ ಇರಿಸಿದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ. ವಿಮಾನ ನಿಲ್ದಾಣಕ್ಕೆ ಹೇಗೆ ಬಂದದ್ದು, ಬಾಂಬ್ ಬ್ಯಾಗನ್ನು ಇರಿಸಿದ ಸ್ಥಳ ಮತ್ತು ಎಸ್ಕಲೇಟರ್ನಲ್ಲಿ ಇಳಿದು ಹೋದ ಜಾಗ, ಪಾರ್ಕಿಂಗ್ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ರಿಕ್ಷಾ ಹತ್ತಿ ಹೋದ ಜಾಗವನ್ನು ತೋರಿಸಿದ್ದಾನೆ.
Last Updated : Jan 24, 2020, 1:29 PM IST