ಕರ್ನಾಟಕ

karnataka

ETV Bharat / state

ವಿಮಾನ ನಿಲ್ದಾಣಕ್ಕೆ ಬಾಂಬ್​ ಇಟ್ಟ ಪ್ರಕರಣ​... ಸಾಕ್ಷಿಗಳ ಮುಂದೆ ಬಾಂಬರ್​ ಆದಿತ್ಯರಾವ್​​ ಪರೇಡ್​ - ಸಾಕ್ಷಿಗಳ ಮುಂದೆ ನಡೆದ ಶಂಕಿತ ಆರೋಪಿ ಆದಿತ್ಯರಾವ್​​ ಪರೇಡ್

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಮಗ್ರಿ ಇರಿಸಿದ್ದ ಆರೋಪಿ‌ ಆದಿತ್ಯ ರಾವ್​​ನ ಗುರುತು ಪತ್ತೆಗಾಗಿ ಇಂದು ಸಾಕ್ಷಿಗಳ ಮುಂದೆ ಜಿಲ್ಲಾ ಕಾರಾಗೃಹದಲ್ಲಿ ಪರೇಡ್ ನಡೆಸಲಾಗಿದೆ.

Adithya_Rao
ಆದಿತ್ಯರಾವ್

By

Published : Mar 10, 2020, 8:49 PM IST

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಮಾಗ್ರಿ ಇರಿಸಿದ್ದ ಆರೋಪಿ‌ ಆದಿತ್ಯ ರಾವ್​​ನ ಗುರುತು ಪತ್ತೆಗಾಗಿ ಇಂದು ಸಾಕ್ಷಿಗಳ ಮುಂದೆ ಜಿಲ್ಲಾ ಕಾರಾಗೃಹದಲ್ಲಿ ಪರೇಡ್ ನಡೆಸಲಾಯಿತು‌.

ಸಾಕ್ಷಿಗಳ ಮುಂದೆ ಬಾಂಬರ್​ ಆದಿತ್ಯರಾವ್​​ ಪರೇಡ್

ಜಿಲ್ಲಾ ಕಾರಾಗೃಹದಲ್ಲಿ ಬಂಧಿತನಾಗಿರುವ ಆದಿತ್ಯ ರಾವ್ ನನ್ನು ಮಂಗಳೂರು ತಹಶಿಲ್ದಾರ್ ಗುರುಪ್ರಸಾದ್, ಅವರ ಸಿಬ್ಬಂದಿ ಹಾಗೂ ಜೈಲು ಅಧೀಕ್ಷಕರ ಸಮ್ಮುಖದಲ್ಲಿ ಸಾಕ್ಷಿಗಳ ಪರೇಡ್ ನಡೆಸಲಾಯಿತು.

ಪರೇಡ್​​ನ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದ ಮಂಗಳೂರು ತಹಶಿಲ್ದಾರ್ ಗುರುಪ್ರಸಾದ್, ಆ ಮಾಹಿತಿಯನ್ನು ಮುಚ್ಚಿದ ಲಕೋಟೆಯೊಳಗೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಎರಡು ವಾರಗಳ ಹಿಂದೆಯೇ ಆದಿತ್ಯ ರಾವ್​ನ ಪರೇಡ್ ನಡೆಸಲು‌ ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಆತನಿಗೆ ಆರೋಗ್ಯ ಸಮಸ್ಯೆ ತಲೆದೋರಿರುವುದರಿಂದ ಪರೇಡ್ ನಡೆಸುವುದನ್ನು ಮುಂದೂಡಲಾಗಿತ್ತು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಆತನನ್ನು ದಾಖಲಿಸಿ ಆತ ಗುಣಮುಖ ಆದ ಬಳಿಕ ಈಗ ಮತ್ತೆ ಈ ಪರೇಡ್ ನಡೆಸಲಾಯಿತು.

ABOUT THE AUTHOR

...view details