ಕರ್ನಾಟಕ

karnataka

ಕುಡ್ಲದ ಚಿತ್ರಮಂದಿರದಲ್ಲಿ ತುಳುವಿನಲ್ಲೇ ಮಾತನಾಡಿದ ರಕ್ಷಿತ್​ ಶೆಟ್ಟಿ.. ಸೆಲ್ಫಿ ಕ್ಲಿಕ್ಕಿಸಿಕೊಂಡ ಫ್ಯಾನ್ಸ್​

By

Published : Jan 6, 2020, 6:18 PM IST

ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್​ಗಾಗಿ ಚಿತ್ರ ತಂಡದೊಂದಿಗೆ ನಟ ರಕ್ಷಿತ್ ಶೆಟ್ಟಿ ಮಂಗಳೂರು ನಗರದ ಸುಚಿತ್ರಾ ಚಿತ್ರ ಮಂದಿರಕ್ಕೆ ಭೇಟಿ ನೀಡಿದರು. ರಕ್ಷಿತ್​ ಶೆಟ್ಟಿ ಕಂಡೊಡನೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

Actor Rakshit Shetty visits Mangalore Theater
ಮಂಗಳೂರಿನ ಚಿತ್ರಮಂದಿರಕ್ಕೆ ನಟ ರಕ್ಷಿತ್​ ಶೆಟ್ಟಿ ಭೇಟಿ

ಮಂಗಳೂರು:ನಗರದ ಸುಚಿತ್ರಾ ಚಿತ್ರ ಮಂದಿರಕ್ಕೆ ನಟ ರಕ್ಷಿತ್ ಶೆಟ್ಟಿ ಆಗಮಿಸಿ ಕೆಲ ಹೊತ್ತು ಅವನೇ‌ ಶ್ರೀಮನ್ನಾರಾಯಣ ಚಿತ್ರ ವೀಕ್ಷಣೆ ಮಾಡಿದರು.

ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್​ಗಾಗಿ ಚಿತ್ರ ತಂಡದೊಂದಿಗೆ ಆಗಮಿಸಿದ ರಕ್ಷಿತ್​ ಶೆಟ್ಟಿ ಕಂಡೊಡನೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ಮಂಗಳೂರಿನ ಚಿತ್ರಮಂದಿರಕ್ಕೆ ನಟ ರಕ್ಷಿತ್​ ಶೆಟ್ಟಿ ಭೇಟಿ

ಸಿನಿಮಾ ವೀಕ್ಷಣೆ ಬಳಿಕ, ತುಳುವಿವಲ್ಲೇ ಸಂಭಾಷಣೆ ನಡೆಸಿದ ರಕ್ಷಿತ್ ಶೆಟ್ಟಿ, ಸೋಮವಾರ ಆದ್ದರಿಂದ ಥಿಯೇಟರ್​ನಲ್ಲಿ ಜನ ಕಡಿಮೆ ಇದ್ದಾರೆ. ಆದರೂ ಕರಾವಳಿ ಭಾಗದಿಂದ ಸಿನಿಮಾಕ್ಕೆ ಒಳ್ಳೆಯ ಪ್ರೋತ್ಸಾಹ ದೊರಕಿದೆ. ಕರಾವಳಿಗರಿಗೆ ನಮ್ಮ ಇಡೀ ಸಿನಿಮಾ ತಂಡದ ಪರವಾಗಿ ಧನ್ಯವಾದ ಸಮರ್ಪಿಸುತ್ತಿದ್ದೇನೆ. ನಮ್ಮ ಎಲ್ಲಾ ಸಿನಿಮಾಗಳಿಗೂ ನಿಮ್ಮ ಪ್ರೋತ್ಸಾಹ ಇದೇ ರೀತಿಯಲ್ಲಿ ಇರಲಿ. ನಾವು ಪ್ರತೀ ಸಲವೂ ಮೊದಲಿನ ಸಿನಿಮಾಕ್ಕಿಂತ ಭಿನ್ನತೆಯನ್ನು ಕೊಡಲು ಪ್ರಯತ್ನಿಸುತ್ತಿದ್ದೇವೆ. ಪ್ರೇಕ್ಷಕರ ಪ್ರೋತ್ಸಾಹ ಇದೇ ರೀತಿ ಇದ್ದಲ್ಲಿ ಇನ್ನೂ ಉತ್ತಮ ಸಿನಿಮಾ ನೀಡಲು ನಮಗೆ ಇನ್ನಷ್ಟು ಹುರುಪು ಬರುತ್ತದೆ ಎಂದು ಹೇಳಿದರು‌. ಈ ಸಂದರ್ಭ ಸಿನಿಮಾದ ನಾಯಕಿ ಸಾನ್ವಿ ಶ್ರೀವಾತ್ಸವ್, ನಿರ್ದೇಶಕ ಸಚಿನ್, ಖಳನಾಯಕ ಬಾಲಾಜಿ ಮನೋಹರ್ ಜೊತೆಗಿದ್ದರು.

For All Latest Updates

TAGGED:

ABOUT THE AUTHOR

...view details