ಕರ್ನಾಟಕ

karnataka

ETV Bharat / state

ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರಕಾರ ತಕ್ಷಣವೇ ಸ್ಪಂದಿಸಬೇಕೆಂದು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ - students demands scholorship in manglore

ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ಎಬಿವಿಪಿ ಪ್ರತಿಭಟನೆ ಕೈಗೊಂಡಿದೆ.

abvp protests in manglore
ಎಬಿವಿಪಿ ಪ್ರತಿಭಟನೆ

By

Published : Jan 19, 2021, 1:14 PM IST

ಮಂಗಳೂರು:ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿ, ಎಲ್ಲ ವಿದ್ಯಾರ್ಥಿಗಳ ಹಾಸ್ಟೆಲ್​ಗಳನ್ನು ತೆರೆಯಿರಿ, ಅತಿಥಿ ಉಪನ್ಯಾಸಕರ ತಕ್ಷಣ ನೇಮಕಾತಿ ಮಾಡಿ ಎಂದು ಒತ್ತಾಯಿಸಿ ಎಬಿವಿಪಿ ಮಂಗಳೂರಿನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿತು.

ಎಬಿವಿಪಿ ಪ್ರತಿಭಟನೆ
ಈ ಸಂದರ್ಭ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಗರ ವಿದ್ಯಾರ್ಥಿನಿ ಪ್ರಮುಖ್ ಶ್ರೀಲಕ್ಷ್ಮಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳು ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲ ಕಾಲ ಸ್ಥಗಿತಗೊಂಡಿದ್ದರೂ, ಇದೀಗ ಮತ್ತೆ ಚೇತರಿಕೆಗೊಳ್ಳುತ್ತಿದೆ. ಕಾಲೇಜುಗಳು ಪ್ರಾರಂಭವಾಗಿದ್ದರೂ, ಭರಪೂರ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿ ಮುಕ್ಕಾಲು ಭಾಗ ಸಮಯ ಕಳೆದರೂ ಇನ್ನೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡದಿರುವುದು ಸರಕಾರದ ನಿಷ್ಪ್ರಯೋಜಕತೆ ಎತ್ತಿ ತೋರಿಸುತ್ತಿದೆ.

ಅದೇ ರೀತಿ, ವಿದ್ಯಾರ್ಥಿಗಳ ಸ್ಕಾಲರ್​ಶಿಪ್​ ಇನ್ನೂ ಬಿಡುಗಡೆಯಾಗಿಲ್ಲ ಹಾಗೂ‌ ಹಾಸ್ಟೆಲ್​ಗಳ ಅನೇಕ ವಿಚಾರಗಳನ್ನು ಸರಕಾರ ಕಡೆಗಣನೆ ಮಾಡಿ ವಿಳಂಬ ನೀತಿ ಅನುಸರಿಸುತ್ತಿದೆ. ಈ ವಿಳಂಬ ಧೋರಣೆಯನ್ನು ‌ಖಂಡಿಸಿ ಇಂದು ಪ್ರತಿಭಟನೆ ನಡೆಸುತ್ತಿದ್ದು, ಈ ಮೂಲಕ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು‌ ನಾವು‌ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದು‌ ಹೇಳಿದರು.

ಇದನ್ನೂ ಓದಿ:ಭಾರತದ ನೆಲದಲ್ಲಿ ಚೀನಾ ಗ್ರಾಮ: ಸರ್ಕಾರದ ಉತ್ತರ ಕೇಳಿದ ಪಿ.ಚಿದಂಬರಂ

ABOUT THE AUTHOR

...view details