ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಮೀಯಾರಿನ ಮೂಲದ ಶ್ರೀನಿವಾಸ ಗೌಡ ಎಂಬ ಯುವಕ ಕಂಬಳೋತ್ಸವದಲ್ಲಿ 13.62ಸೆಕೆಂಡಲ್ಲಿ 142.5 ಮೀ ದೂರ ಓಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.
13.62 ಸೆಕೆಂಡಲ್ಲಿ 142.5ಮೀಟರ್ ಓಡಿದ ಯುವಕ... ಕಂಬಳದ ಕೋಣಗಳಿಗೆ ಸೆಡ್ಡು ಹೊಡೆದ ಓಟಗಾರ - ಮಂಗಳೂರು ಕಂಬಳೋತ್ಸವ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ ಕಂಬಳೋತ್ಸವದಲ್ಲಿ 13.62ಸೆಕೆಂಡಲ್ಲಿ 142.5 ಮೀ ದೂರ ಓಡಿ ದಾಖಲೆ ಮಾಡಿದ್ದಾರೆ.

ಕಂಬಳದ ಕೋಣಗಳಿಗೆ ಸೆಡ್ಡು ಹೊಡೆದ ಓಟಗಾರ
ಮಂಗಳೂರು ಸಮೀಪದ ಐಕಳ ಕಂಬಳೋತ್ಸವದಲ್ಲಿ ಶ್ರೀನಿವಾಸ ಗೌಡ ಈ ದಾಖಲೆ ಮೆರೆದಿದ್ದಾರೆ. ಕೆಸರು ತುಂಬಿದ ಗದ್ದೆಯಲ್ಲಿ ಕೋಣಗಳ ಜೊತೆಯಲ್ಲಿ ಅದೇ ವೇಗದಲ್ಲಿ ಓಡಿ ಈ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.