ಕರ್ನಾಟಕ

karnataka

ETV Bharat / state

ಬಹಿರ್ದೆಸೆಗೆ ಬಸ್ಸಿನಿಂದ ಕೆಳಗಿಳಿದ ಹಿರಿಯ ಸಾಹಿತಿ: ಯಮಸ್ವರೂಪಿ ಕಾರಿಗೆ ಬಲಿ

ಶಿರಾಡಿ ಸಮೀಪದ ಪುಲ್ಲೋಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಬಸ್​ನಿಂದ ಬಹಿರ್ದೆಸೆಗೆಂದು ಕೆಳಗಿಳಿದಿದ್ದ ಹಿರಿಯ ಸಾಹಿತಿವೋರ್ವರು ಮೃತಪಟ್ಟಿದ್ದಾರೆ.

By

Published : Dec 12, 2019, 11:21 PM IST

Updated : Dec 12, 2019, 11:31 PM IST

A person who was standing out side the bus dead
ಬಹಿರ್ದೆಸೆಗೆ ಬಸ್ಸಿನಿಂದ ಹೊರನಿಂತಿದ್ದ ಯಾತ್ರಿಯ ಪಯಣ ಹೀಗೂ ಕೊನೆಯಾಯ್ತು...?

ಮಂಗಳೂರು:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಸಮೀಪದ ಪುಲ್ಲೋಟೆ ಎಂಬಲ್ಲಿ ಕಾರು ಡಿಕ್ಕಿ ಹೊಡೆದು ಬಸ್ ಹಿರಿಯ ಸಾಹಿತಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಯಾತ್ರಿಗೆ ಡಿಕ್ಕಿ ಹೊಡೆದ ಕಾರು

ಬೆಂಗಳೂರು ನಿವಾಸಿಯಾಗಿದ್ದ ಸಾಹಿತಿ ಕೋಟೇಶ್ವರ ಸೂರ್ಯನಾರಾಯಣ ರಾವ್ (82) ಮೃತರು. ಇವರು ಕುಂದಾಪುರದಲ್ಲಿ ನಡೆಯಬೇಕಿದ್ದ ಒಂದು ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಬಸ್ಸಿನಲ್ಲಿ ಬರುತ್ತಿದ್ದರು. ಬಸ್ ಶಿರಾಡಿ ಸಮೀಪದ ಪುಲ್ಲೊಟೆ ಎಂಬಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಸೂರ್ಯನಾರಾಯಣ ರಾವ್ ಅವರು ಬಹಿರ್ದೆಸೆಗೆ ಬಸ್ಸಿನಿಂದ ಹೊರಗಡೆ ಇಳಿದಿದ್ದರು ಎನ್ನಲಾಗ್ತಿದೆ. ಈ ವೇಳೆ ವೇಗವಾಗಿ ಬಂದ ಕಾರೊಂದು ಸೂರ್ಯನಾರಾಯಣ ರಾವ್ ಅವರಿಗೆ ಡಿಕ್ಕಿ ಹೊಡೆದಿದೆ. ಅನಂತರ ತೀವ್ರವಾಗಿ ಗಾಯಗೊಂಡ ಇವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದ್ರೆ ಅವರು ಅಲ್ಲೇ ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ.

ಬಸ್ ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ನಿಲ್ಲಿಸಿದ್ದು ಮತ್ತು ಕಾರು ಅತಿ ವೇಗವಾಗಿ ಬಂದಿರುವುದೇ ಅಪಘಾತದ ಕಾರಣ ಎನ್ನಲಾಗ್ತಿದೆ. ಸದ್ಯ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Last Updated : Dec 12, 2019, 11:31 PM IST

ABOUT THE AUTHOR

...view details