ಸುರತ್ಕಲ್: ಪ್ರಿಯತಮೆ ಕೊಂದು ತಾನೂ ನೇಣಿಗೆ ಶರಣಾದ ಹೂವಿನ ವ್ಯಾಪಾರಿ
15:32 November 18
ಯಾವುದೋ ವೈಮನಸ್ಸಿನ ಕಾರಣದಿಂದ ಮಹಿಳೆ ಕೊಂದು ತಾನೂ ಆತ್ಮಹತ್ಯೆ
ಸುರತ್ಕಲ್: ಹೂವಿನ ವ್ಯಾಪಾರಿಯೊಬ್ಬ ಪ್ರಿಯತಮೆಯನ್ನು ಕೊಂದು, ತಾನೂ ನೇಣಿಗೆ ಶರಣಾಗಿರುವ ಘಟನೆ ಸುರತ್ಕಲ್ನ ಕುಳಾಯಿಯಲ್ಲಿ ನಡೆದಿದೆ.
ವಸಂತ್ (44) ಆತ್ಮಹತ್ಯೆ ಮಾಡಿಕೊಂಡವ, ಈತ ಕಳೆದ ಏಳೆಂಟು ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಿದ್ದ. ಅಂಗಡಿಗೆ ಹೂವು ಕೊಳ್ಳಲು ಬರುತ್ತಿದ್ದ ಸೂರಿಂಜೆಯ ವಿವಾಹಿತ ಮಹಿಳೆಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಯಾವುದೋ ವೈಮನಸ್ಸಿನ ಕಾರಣ, ಬುಧವಾರ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮಾಹಿತಿಯಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಸುರತ್ಕಲ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಮೃತ ದೇಹವನ್ನು ಪೋಸ್ಟ್ ಮಾರ್ಟ್ಂ ಗೆ ಕಳುಹಿಸಿ ಕೊಡಲಾಯಿತು.