ಕರ್ನಾಟಕ

karnataka

By

Published : Apr 10, 2021, 9:22 PM IST

ETV Bharat / state

ಭಿಕ್ಷಾಟನೆ ದಂಧೆ: ಮಂಗಳೂರಿನಲ್ಲಿ ಎರಡು ತಿಂಗಳ ಹಸುಗೂಸಿನೊಂದಿಗೆ 9 ಮಕ್ಕಳ ರಕ್ಷಣೆ

ಜಂಟಿ ಕಾರ್ಯಾಚರಣೆ ನಡೆಸಿದ ದ.ಕ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯವರು ಭಿಕ್ಷಾಟನೆ ದಂಧೆಯಿಂದ ಪುಟ್ಟ ಮಕ್ಕಳನ್ನು ರಕ್ಷಿಸಿದ್ದಾರೆ.

9 children rescued from begging in Managaluru
ಭಿಕ್ಷಾಟನೆ ಧಂದೆಯಿಂದ ಮಕ್ಕಳ ರಕ್ಷಣೆ

ಮಂಗಳೂರು: ಪುಟ್ಟ ಮಕ್ಕಳನ್ನು ಭಿಕ್ಷಾಟನೆಗೆ ಇಳಿಸಿ ದುಡ್ಡು ಮಾಡುವ ದಂಧೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿರುವ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಎರಡು ತಿಂಗಳ ಹಸುಗೂಸಿನೊಂದಿಗೆ ಒಂಭತ್ತು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೋತ್ಸವದ ಹಿನ್ನೆಲೆ ಹೆಚ್ಚಿನ ಜನಸಂದಣಿ ಸೇರುವುದರಿಂದ ಈ ಮಕ್ಕಳನ್ನು ಭಿಕ್ಷಾಟನೆಗೆ ಕಳಿಸಲಾಗಿತ್ತು. ಈ ಮಕ್ಕಳಲ್ಲಿ ಎರಡು ತಿಂಗಳ ಹಸಗೂಸಿನೊಂದಿಗೆ ಉಳಿದ ಎಲ್ಲಾ ಮಕ್ಕಳು 7 ವರ್ಷದ ಒಳಗಿನವರು. ಮಾಹಿತಿ ತಿಳಿದ ದ.ಕ ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷರು ಜಂಟಿ ಕಾರ್ಯಾಚರಣೆ ನಡೆಸಿ 9 ಮಕ್ಕಳನ್ನು ರಕ್ಷಿಸಿದ್ದಾರೆ.

ಓದಿ : ಗೆಳೆಯನಂತಿದ್ದ ಕೋಳಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಪುಟಾಣಿಗಳು

ರಕ್ಷಣೆ ಮಾಡಿರುವ ಈ ಮಕ್ಕಳನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡುವ ಚಿಂತನೆಯನ್ನು ದ.ಕ ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿ ಮತ್ತು ಮಕ್ಕಳ ರಕ್ಷಣಾ ಸಮಿತಿ ಮಾಡಿದೆ.

ABOUT THE AUTHOR

...view details