ಕರ್ನಾಟಕ

karnataka

By

Published : Jul 21, 2020, 10:22 PM IST

ETV Bharat / state

ದ.ಕ ಜಿಲ್ಲೆಯಲ್ಲಿ ಕೊರೊನಾಗೆ 5 ಮಂದಿ ಬಲಿ.. 149 ಸೋಂಕಿತರು ಪತ್ತೆ

23 ಮಂದಿ ಪ್ರಾಥಮಿಕ ಸಂಪರ್ಕ, 67 ಮಂದಿ ಐಎಲ್ಐ ಪ್ರಕರಣ, 22 ಮಂದಿ SARI ಪ್ರಕರಣ, ಓರ್ವರಿಗೆ ವಿದೇಶ ಪ್ರವಾಸದಿಂದ ಬಂದವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದ 15 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ..

Mangalore corona case
Mangalore corona case

ಮಂಗಳೂರು: ಜಿಲ್ಲೆಯ ಮೇಲೆ ಕೊರೊನಾಗೆ ಇಂದು ಐದು ಮಂದಿ ಬಲಿಯಾಗಿದ್ದಾರೆ ಮತ್ತು 149 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇಂದು ಮೃತರಾದ ಐವರಲ್ಲಿ ಮೂವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ರೆ, ಒಬ್ಬರು ಉತ್ತರಕನ್ನಡದ ಭಟ್ಕಳ, ಮತ್ತೊಬ್ಬರು ಹಾವೇರಿ ಜಿಲ್ಲೆಯ ಬ್ಯಾಡಗಿಯವರಾಗಿದ್ದಾರೆ. ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಈ ಪೈಕಿ ಹೊರ ಜಿಲ್ಲೆಯ 15 ಮಂದಿ ಸಾವಿಗೀಡಾಗಿದ್ದಾರೆ.

ಮಂಗಳೂರಿನ 81 ವರ್ಷದ ಪುರುಷ, ಬೆಳ್ತಂಗಡಿಯ 51 ವರ್ಷದ ಪುರುಷ, ಮಂಗಳೂರಿನ 52 ವರ್ಷದ ಮಹಿಳೆ, ಭಟ್ಕಳದ 65 ವರ್ಷದ ವೃದ್ಧ, ಹಾವೇರಿಯ 63 ವರ್ಷದ ವೃದ್ಧ ಮೃತಪಟ್ಟವರು. ಇಂದು 149 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

23 ಮಂದಿ ಪ್ರಾಥಮಿಕ ಸಂಪರ್ಕ, 67 ಮಂದಿ ಐಎಲ್ಐ ಪ್ರಕರಣ, 22 ಮಂದಿ SARI ಪ್ರಕರಣ, ಓರ್ವರಿಗೆ ವಿದೇಶ ಪ್ರವಾಸದಿಂದ ಬಂದವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದ 15 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಇನ್ನೂ ಜಿಲ್ಲೆಯಲ್ಲಿ ಈವರೆಗೆ 3834 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 127 ಮಂದಿ ಗುಣಮುಖರಾಗಿದ್ದು, ಈವರೆಗೆ 1675 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2070 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details