ಕರ್ನಾಟಕ

karnataka

ETV Bharat / state

ಮುಂದುವರೆದ ಕರ್ಫ್ಯೂ: ಎರಡನೇ ದಿನವೂ ಮಂಗಳೂರು ನಗರ ಸ್ತಬ್ಧ - ಮಂಗಳೂರಿನಲ್ಲಿ ಮುಂದುವರಿದ ಕರ್ಫ್ಯೂ: ಎರಡನೇ ದಿನವೂ ನಗರ ಸ್ತಬ್ಧ

ಹಿಂಸಾಚಾರದ ಬಳಿಕ ಮಂಗಳೂರು ನಗರದಾದ್ಯಂತ ಜಾರಿಯಲ್ಲಿರುವ ಕರ್ಫ್ಯೂ ಎರಡನೇ ದಿನವೂ ಮುಂದುವರೆದಿದೆ.

2nd day also curfew continued in Mangalore
ಮಂಗಳೂರಿನಲ್ಲಿ ಮುಂದುವರಿದ ಕರ್ಫ್ಯೂ: ಎರಡನೇ ದಿನವೂ ನಗರ ಸ್ತಬ್ಧ

By

Published : Dec 21, 2019, 8:35 AM IST

ಮಂಗಳೂರು: ಹಿಂಸಾಚಾರದ ಬಳಿಕ ಮಂಗಳೂರು ನಗರದಾದ್ಯಂತ ಜಾರಿಯಲ್ಲಿರುವ ಕರ್ಫ್ಯೂ ಎರಡನೇ ದಿನವೂ ಮುಂದುವರೆದಿದೆ. ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಆಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

ಮಂಗಳೂರಿನಲ್ಲಿ ಮುಂದುವರಿದ ಕರ್ಫ್ಯೂ: ಎರಡನೇ ದಿನವೂ ನಗರ ಸ್ತಬ್ಧ

ನಗರದಲ್ಲಿ ಯಾವುದೇ ಖಾಸಗಿ ಬಸ್​ ಸೇವೆ ಇಲ್ಲ. ಅಂಗಡಿ ಮುಂಗಟ್ಟುಗಳು ಬಂದ್​ ಆಗಿವೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಜೊತೆಗೆ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳನ್ನು ಕೂಡ ಬಂದ್ ಮಾಡಲಾಗಿದೆ.

ಇನ್ನು ಬೆಳಗ್ಗೆ 6ರಿಂದ 8 ಗಂಟೆಯವರೆಗೆ ನಗರದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿ ಜನರಿಗೆ ದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಈ ವೇಳೆ ಜನ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಅಂಗಡಿಗಳಿಗೆ ಮುಗಿಬಿದ್ದರು.

ಗೋಲಿಬಾರ್​ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಗಳೂರಿಗೆ ಭೇಟಿ ನೀಡಿ ಪೊಲೀಸ್​ ಅಧಿಕಾರಿಗಳು ಮತ್ತು ಶಾಸಕರು, ಸಂಸದರ ಜೊತೆ ಸಭೆ ನಡೆಸಲಿದ್ದಾರೆ.

ABOUT THE AUTHOR

...view details