ಕರ್ನಾಟಕ

karnataka

By

Published : Aug 31, 2020, 8:46 PM IST

ETV Bharat / state

ದಕ್ಷಿಣಕನ್ನಡ ಜಿಲ್ಲೆಯಲ್ಲಿಂದು 270 ಜನರಿಗೆ ಕೊರೊನಾ :  12 ಜನರು ಮೃತ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Dakshinakannada
Dakshinakannada

ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 270 ಜನರಿಗೆ ಕೊರೊನಾ ತಗುಲಿದೆ.

ಇಂದಿನ ಕೊರೊನಾ ಪ್ರಕರಣಗಳ. ಮಾಹಿತಿ :

ಇಂದು 117 ಮಂಗಳೂರು ತಾಲೂಕು, 90 ಬಂಟ್ವಾಳ ತಾಲೂಕು, 24 ಪುತ್ತೂರು ತಾಲೂಕು, 14 ಸುಳ್ಯ ತಾಲೂಕು, 14 ಬೆಳ್ತಂಗಡಿ ತಾಲೂಕು ಮತ್ತು 11 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 12,713 ಮಂದಿಗೆ ಕೊರೊನಾ ದೃಢಪಟ್ಟಿದೆ.

ಮೃತರ ಮಾಹಿತಿ:

ಇಂದು ಜಿಲ್ಲೆಯಲ್ಲಿ 12 ಜನರು ಸಾವನ್ನಪ್ಪಿದ್ದು, ಅದರಲ್ಲಿ 6 ಮಂದಿ ಮಂಗಳೂರು ತಾಲೂಕಿನವರು, ಒಬ್ಬರು ಬಂಟ್ವಾಳ ತಾಲೂಕಿನವರು, ಒಬ್ಬರು ಪುತ್ತೂರು ತಾಲೂಕಿನರು, ಒಬ್ಬರು ಬೆಳ್ತಂಗಡಿ ತಾಲೂಕಿನವರು ಮತ್ತು ಮೂವರು ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 368 ಕ್ಕೆ ಏರಿಕೆಯಾಗಿದೆ.

ಗುಣಮುಖ:

ಜಿಲ್ಲೆಯಲ್ಲಿ ಇಂದು 367 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 9789 ಮಂದಿ ಗುಣಮುಖರಾಗಿದ್ದಾರೆ. 2556 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

ABOUT THE AUTHOR

...view details