ಕರ್ನಾಟಕ

karnataka

By

Published : Aug 21, 2020, 8:28 PM IST

ETV Bharat / state

ದಕ್ಷಿಣ ಕನ್ನಡ: 202 ಮಂದಿಗೆ ಸೋಂಕು, ಐವರು ಸಾವು

ದಕ್ಷಿಣಕನ್ನಡ ಜಿಲ್ಲೆಯ ಇಂದಿನ ಕೊರೊನಾ ಬುಲೆಟಿನ್ ಹೀಗಿದೆ..

Dakshina kannada
Dakshina kannada

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 202 ಮಂದಿಗೆ ಸೋಂಕು ತಗುಲಿದ್ದು, ಐವರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 300 ದಾಟಿದೆ.

ಇಂದಿನ ಕೊರೊನಾ ಸೋಂಕಿನ ವಿವರ:

ಸೋಂಕಿತರಲ್ಲಿ 139 ಮಂದಿ ಮಂಗಳೂರು ತಾಲೂಕು, 35 ಮಂದಿ ಬಂಟ್ವಾಳ,11 ಮಂದಿ ಪುತ್ತೂರು, 3 ಮಂದಿ ಸುಳ್ಯ, 4 ಮಂದಿ ಬೆಳ್ತಂಗಡಿ ಮತ್ತು 10 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,914 ಕ್ಕೆ ಏರಿಕೆಯಾಗಿದೆ.

ಸಾವನ್ನಪ್ಪಿದವರ ವಿವರ:

ಜಿಲ್ಲೆಯಲ್ಲಿಂದು ಸಾವನ್ನಪ್ಪಿದ 5 ಮಂದಿಯಲ್ಲಿ ಒಬ್ಬರು ಮಂಗಳೂರು ತಾಲೂಕು, ಇಬ್ಬರು ಬಂಟ್ವಾಳ ತಾಲೂಕು, ಒಬ್ಬ ಪುತ್ತೂರು ತಾಲೂಕು ಮತ್ತು ಒಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 301 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 64 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ 7,193 ಮಂದಿ ಗುಣಮುಖರಾಗಿದ್ದಾರೆ. 2,420 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details