ಚಿತ್ರದುರ್ಗ: ಕುಡಿದ ಅಮಲಿನಲ್ಲಿ ಶಿವರಾಜ ಎಂಬಾತನ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆ ಮೂವರು ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಜಿಲ್ಲೆಯ ಅಡವಿಗೊಲ್ಲರಹಳ್ಳಿಯಲ್ಲಿ ನಡೆದಿದೆ.
ಇಬ್ಬರ ಜಗಳ... ಮಧ್ಯೆ ಬಂದ ಮೂವರು ಯುವಕರಿಗೆ ಗೂಸಾ - ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಅಡವಿಗೊಲ್ಲರಹಳ್ಳಿ
ಮೂರನೇಯವರ ಆಸ್ತಿ ವಿವಾದದಲ್ಲಿ ತಲೆ ಹಾಕಿದ ಮೂವರು ಯುವಕರು ಗೂಸ ತಿಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಗೂಸಾ ತಿಂದ ಯುವಕರು
ಗೂಸಾ ತಿಂದ ಯುವಕರು
ಶಿವರಾಜ್ ಮತ್ತು ಜಗದೀಶ್ ಎಂಬುವವರ ನಡುವೆ ಜಾಗದ ವಿವಾದ ನಡೆದಿತ್ತು. ಈ ಹಿನ್ನೆಲೆ ಜಗದೀಶ್ ಪರವಾಗಿ ಬಂದು ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದ ನಗರದ ಯುವಕರನ್ನು ಜನ ಹಣ್ಣಗಾಯಿ ನೀರುಗಾಯಿ ಮಾಡಿದ್ದಾರೆ.
ಚಿತ್ರದುರ್ಗ ನಗರದ ಜಯಸೂರ್ಯ, ಮಾರುತಿ, ಶರತ್ ಎಂಬುವವರನ್ನು ಥಳಿಸಿ ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದು, ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.