ಕರ್ನಾಟಕ

karnataka

ETV Bharat / state

ಹಿರಿಯೂರಿನ ಟೋಲ್​ ಗೇಟ್​ನಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು - ಚಿತ್ರದುರ್ಗ ಗುಯಾಲಾಳು ಟೋಲ್ ಗೇಟ್​ ಬಳಿ ಅಪಘಾತ

ನಿಂತಿದ್ದ ಟ್ಯಾಂಕರ್​​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಗುಯಾಲಾಳು ಟೋಲ್ ಬಳಿ ನಡೆದಿದೆ.

three-died-on-spot-when-car-rams-into-tanker-at-chitradurga
ಹಿರಿಯೂರಿನ ಟೋಲ್​ ಗೇಟ್​ನಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

By

Published : Feb 3, 2022, 5:38 PM IST

Updated : Feb 3, 2022, 6:18 PM IST

ಚಿತ್ರದುರ್ಗ:ಟ್ಯಾಂಕರ್​​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಗುಯಾಲಾಳು ಟೋಲ್ ಬಳಿ ಸಂಭವಿಸಿದೆ.

ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು

ಟೋಲ್ ಶುಲ್ಕ ನೀಡಲು ನಿಂತಿದ್ದ ಟ್ಯಾಂಕರ್​​ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಬೆಳಗಾವಿ ಮೂಲದ ರಮೇಶ್ (55), ವಿಶ್ವನಾಥ್ (65) ಮತ್ತು ಸೀಮಾ (45) ಎಂದು ಗುರುತಿಸಲಾಗಿದೆ.

ಅಪಘಾತದ ಸಿಸಿಟಿವಿ ವಿಡಿಯೋ

ಕಾರಲ್ಲಿ ಸಿಲುಕಿಕೊಂಡಿದ್ದ ಇವರ ಮೃತದೇಹಗಳನ್ನು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಗಿದೆ. ಇವರೆಲ್ಲ ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟೋಲ್​ ಗೇಟ್​

ಇದನ್ನೂ ಓದಿ:ಮಂಗಳೂರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ: ಕಾಲೇಜು ವಿದ್ಯಾರ್ಥಿನಿಯರು ಸೇರಿ ನಾಲ್ವರು ಯುವತಿಯರ ರಕ್ಷಣೆ

Last Updated : Feb 3, 2022, 6:18 PM IST

ABOUT THE AUTHOR

...view details