ಕರ್ನಾಟಕ

karnataka

ಚಿತ್ರದುರ್ಗದಲ್ಲಿ ಮನೆಗಳ್ಳತನ: ನಗದು, ಆಭರಣ ದೋಚಿ ಪರಾರಿ

By

Published : Dec 25, 2019, 12:33 PM IST

ಮನೆಯ ಬೀಗ‌ ಮುರಿದ ಕಳ್ಳರು ನಗದು ಹಾಗೂ ಆಭರಣ ಕದ್ದೊಯ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದಲ್ಲಿ ನಡೆದಿದೆ.

chitradurga
ಚಿತ್ರದುರ್ಗದಲ್ಲಿ ಮನೆಗಳ್ಳತನ: ನಗದು, ಆಭರಣ ದೋಚಿ ಪರಾರಿ

ಚಿತ್ರದುರ್ಗ:ಮನೆಯ ಬೀಗ‌ ಮುರಿದ ಕಳ್ಳರು ನಗದು ಹಾಗೂ ಆಭರಣ ಕದ್ದೊಯ್ದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದಲ್ಲಿ ನಡೆದಿದೆ.

ರಂಗಪ್ಪ ಎಂಬವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸುಮಾರು 15 ಸಾವಿರ ರೂ. ನಗದು ಹಾಗೂ 30 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರದುರ್ಗದಲ್ಲಿ ಮನೆಗಳ್ಳತನ: ನಗದು, ಆಭರಣ ದೋಚಿ ಪರಾರಿ

ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಘಟನೆ ನಡೆದ ಮರುದಿನ ವಿಷಯ ಬೆಳಕಿಗೆ ಬಂದಿದೆ. ಇದನ್ನ ಗಮನಿಸಿದ ಮನೆ ಮಾಲೀಕ ರಂಗಪ್ಪ, ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details