ಕರ್ನಾಟಕ

karnataka

By

Published : Apr 14, 2020, 9:16 PM IST

ETV Bharat / state

ಲಾಕ್​​​​​ಡೌನ್ ನಡುವೆ ಎಣ್ಣೆಗಾಗಿ ಬಾರ್​​​​ಗೆ ಕನ್ನ ಹಾಕಿದ ಕುಡುಕರು

ಲಾಕ್​​ಡೌನ್​ ಹಿನ್ನೆಲೆಯಲ್ಲಿ ಬಾರ್​​​​ಗಳು ಬಂದ್​ ಆದ ಪರಿಣಾಮ ಬೇಸತ್ತ ಕುಡುಕರು ಬಾರ್​ ಬೀಗ ಮುರಿದು ಮದ್ಯ ಕದ್ದೊಯ್ದಿದ್ದಾರೆ.

The drunkards who barged into the bar
ಬಾರ್​​​​ಗೆ ಕನ್ನ ಹಾಕಿದ ಕುಡುಕರು

ಚಿತ್ರದುರ್ಗ: ಕೊರೊನಾ ಸೊಂಕು ಹರಡದಂತೆ ಭಾರತದಲ್ಲಿ ವಿಧಿಸಿರುವ ಲಾಕ್​​​ಡೌನ್​​​​ನಲ್ಲಿ ಬಾರ್​​ಗಳನ್ನು ಬಂದ್​ ಮಾಡಲಾಗಿದೆ. ಹೀಗಾಗಿ ಬೇಸತ್ತ ಕುಡುಕರು ಬಾರ್​​ಗಳಿಗೆ ಕನ್ನ ಹಾಕುತ್ತಿದ್ದಾರೆ. ಇಂತಹದ್ದೊಂದು ಪ್ರಕರಣ ಚಿತ್ರದುರ್ಗದಲ್ಲೂ ಬೆಳಕಿಗೆ ಬಂದಿದೆ.

ನಗರದ ಕೆಎಸ್​​​ಆರ್​ಟಿಸಿ ಬಸ್ ಮುಂಭಾಗದ ನರ್ತಕಿ ಬಾರ್​​​​​ನ ಬೀಗ ಮುರಿದು 20 ಸಾವಿರ ಬೆಲೆಬಾಳುವ ಮದ್ಯ ಹಾಗೂ 8 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details