ಕರ್ನಾಟಕ

karnataka

By

Published : Nov 7, 2019, 11:39 PM IST

ETV Bharat / state

ಅಯೋಧ್ಯೆ ತೀರ್ಪಿಗೂ, ರಾಜ್ಯ‌‌ದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ: ಬಿಎಸ್​ವೈ ಸ್ಪಷ್ಟನೆ

ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಇಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯ‌‌ದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ ತಿಳಿಸಿದರು.

Chief Minister BS Yeddyurappa clarified

ಚಿತ್ರದುರ್ಗ: ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಇಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯ‌‌ದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್​​.ಯಡಿಯೂರಪ್ಪ

ಹೊಸದುರ್ಗ ತಾಲೂಕಿನ ನೀರಗುಂದ ಗ್ರಾಮದ ಬಳಿ ಸಾಣೇಹಳ್ಳಿ ತರಳಬಾಳು ಶಾಖಾಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವಕಕ್ಕೆ ತೆರಳುವ ಮುನ್ನ ಪ್ರತಿಕ್ರಿಯಿಸಿದ ಅವರು, ಆಯೋಧ್ಯೆ ತೀರ್ಪು ಪರ-ವಿರೋಧ ಏನೇ ಬಂದರೂ ಸ್ವೀಕರಿಸಬೇಕು ಎಂದರು.

ಇನ್ನೂ ಡಿಕೆಶಿ ಕುಟುಂಬಕ್ಕೆ ಬಿಜೆಪಿ ನಾಯಕರು, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಶಾಖಾ ಮಠದತ್ತ ತೆರಳಿದರು.

ABOUT THE AUTHOR

...view details