ಕರ್ನಾಟಕ

karnataka

ಚಿತ್ರದುರ್ಗದಲ್ಲಿ ಡೆಂಗ್ಯೂ, ಚಿಕುನ್​ ಗುನ್ಯಾ ತಡೆಗೆ ಈಗಿನಿಂದಲೇ ಕ್ರಮ ವಹಿಸಿ: ಜಿಲ್ಲಾಧಿಕಾರಿ

By

Published : May 13, 2020, 10:35 PM IST

ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ವಿಷಯದಲ್ಲಿಯೇ ಅಧಿಕಾರಿಗಳು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು, ಉಳಿದಂತೆ ಜನರಿಗೆ ಮಾರಕವಾಗಬಹುದಾದ ಡೆಂಗ್ಯೂ, ಚಿಕುನ್​​ ಗುನ್ಯಾ ರೋಗ ನಿಯಂತ್ರಣ ಕುರಿತಂತೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಇದಕ್ಕಾಗಿ ಜನರಲ್ಲಿ ಈಗಿನಿಂದಲೇ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್​​ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Take action to prevent malaria, Chikungunya in Chitradurga: DC
ಚಿತ್ರದುರ್ಗದಲ್ಲಿ ಮಲೇರಿಯಾ, ಚಿಕುನ್​ ಗುನ್ಯಾ ತಡೆಗೆ ಈಗಿನಿಂದಲೇ ಕ್ರಮ ವಹಿಸಿ-ಜಿಲ್ಲಾಧಿಕಾರಿ

ಚಿತ್ರದುರ್ಗ:ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಚಿಕುನ್​​​ ಗುನ್ಯಾ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದು, ಸೊಳ್ಳೆಗಳಿಂದ ಹರಡುವ ಈ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಮುದಾಯಕ್ಕೆ ಆರೋಗ್ಯ ಶಿಕ್ಷಣ ನೀಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

ಡೆಂಗ್ಯೂ, ಚಿಕುನ್​​ ಗುನ್ಯಾ, ಮಲೇರಿಯಾ ರೋಗ ತಡೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ವಿಷಯದಲ್ಲಿಯೇ ಅಧಿಕಾರಿಗಳು ಹೆಚ್ಚಿನ ಗಮನವನ್ನು ಕೇಂದ್ರೀಕರಿಸಿದ್ದು, ಉಳಿದಂತೆ ಜನರಿಗೆ ಮಾರಕವಾಗಬಹುದಾದ ಡೆಂಗ್ಯೂ, ಚಿಕುನ್​​ ಗುನ್ಯಾ ರೋಗ ನಿಯಂತ್ರಣ ಕುರಿತಂತೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಕಳೆದ ವರ್ಷ ಜಿಲ್ಲೆಯಲ್ಲಿ ಒಟ್ಟು 438 ಡೆಂಗ್ಯೂ ಹಾಗೂ 196 ಚಿಕುನ್​​ ಗುನ್ಯಾ, 9 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು.

ಅಲ್ಲದೆ ಕಳೆದ ವರ್ಷ ಏಪ್ರಿಲ್ ಅಂತ್ಯಕ್ಕೆ 17 ಡೆಂಗ್ಯೂ, 22 ಚಿಕುನ್​​ ಗುನ್ಯಾ ಪ್ರಕರಣಗಳು ಕಂಡು ಬಂದಿದ್ದವು. ಆದರೆ ಈ ವರ್ಷ ಏಪ್ರಿಲ್ ಅಂತ್ಯಕ್ಕೆ 124 ಡೆಂಗ್ಯೂ, 54 ಚಿಕುನ್​​ ಗುನ್ಯಾ, 3 ಮಲೇರಿಯಾ ಪ್ರಕರಣ ವರದಿಯಾಗಿವೆ. ಅದರಲ್ಲೂ ಚಿತ್ರದುರ್ಗ ತಾಲೂಕು ಒಂದರಲ್ಲೇ 91 ಡೆಂಗ್ಯೂ, 42 ಚಿಕುನ್​​ ಗುನ್ಯಾ ಪ್ರಕರಣ ಪತ್ತೆಯಾಗಿವೆ.

ಇದೀಗ ತಾನೆ ಮಳೆಗಾಲ ಆರಂಭವಾಗಿದ್ದು, ಬಳಿಕ ಈ ರೋಗಗಳು ಇನ್ನಷ್ಟು ಹೆಚ್ಚು ವರದಿಯಾಗುವ ಸಾಧ್ಯತೆಗಳು ಇರುವುದರಿಂದ ಇವು ಹರಡದಂತೆ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವ್ಯಾಪಕವಾಗಿ ಸಮುದಾಯದಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ABOUT THE AUTHOR

...view details