ಚಿತ್ರದುರ್ಗ: ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಎತ್ತಿನ ಗಾಡಿಗಳು ಜನರ ಮೇಲೆ ಹರಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ನಡೆದಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಸೊಂಡೆಕೆರೆ ಗ್ರಾಮದಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ವೇಳೆ, 60ಕ್ಕೂ ಅಧಿಕ ಜೋಡೆತ್ತಿನ ಗಾಡಿಗಳು ಆಗಮಿಸಿದ್ದವು. ಸ್ಪರ್ಧೆ ವೀಕ್ಷಣೆಗೆಗಾಗಿ ಸುತ್ತಮುತ್ತಲಿನ ಗ್ರಾಮದ ಜನರು ಬಂದಿದ್ದರು. ಈ ಜನದಟ್ಟಣೆ ನೋಡಿ ಹೆದರಿದ ಎತ್ತುಗಳು ದಿಢೀರನೆ ವೀಕ್ಷಕರೆಡೆ ಓಡಿಬಂದಿವೆ. ಎತ್ತಿನಗಾಡಿಯೊಂದು ಅನಸೂಯಮ್ಮ (67) ಎಂಬ ವೃದ್ಧೆ ಮೇಲೆ ಹರಿದಿದ್ದು, ಅವರ ಕಾಲು ಮುರಿದಿದೆ. ಇನ್ನೂ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.